Размер видео: 1280 X 720853 X 480640 X 360
Показать панель управления
Автовоспроизведение
Автоповтор
ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ.🙏🙏🙏🙏🙏🙏
ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||ಹರಿಕಥಾಮೃತಸಾರ ಶ್ರೀಮದ್ಗುರುವರಜಗನ್ನಾಥ ದಾಸರ ಕರತಲಾಮಲಕವನೆಪೇಳಿದ ಸಕಲ ಸಂಧಿಗಳಪರಮ ಪಂಡಿತ ಮಾನಿಗಳುಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದುತೋರಿ ಪೇಳುವದಲ್ಲ ಧರೆಯೊಳಗೆ||1||ಭಾಮಿನೀ ಷಟ್ಪದಿಯ ರೂಪದಲೀಮಹಾದ್ಭುತ ಕಾವ್ಯದಾದಿಯೊಳಾಮನೋಹರ ತರತರಾತ್ಮಕ ನಾಂದಿ ಪದ್ಯಗಳಯಾಮಯಾಮಕೆ ಪಠಿಸುವವರಸುಧಾಮಸ ಕೈಪಿಡಿಯಲೋಸುಗಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||ಸಾರವೆಂದರೆ ಹರಿಕಥಾಮೃತಸಾರವೆಂಬುದೆಮ್ಮ ಗುರುವರಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನಸಾರಥಿಯ ಬಲಗೊಂಡು ಸಾರಾಸಾರಗಳ ನಿರ್ಣೈಸಿ ಪೇಳ್ದನುಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||ದಾಸವರ್ಯರ ಮುಖದಿ ನಿಂದುರಮೇಶನನು ಕೀರ್ತಿಸುವ ಮನದಭಿಲಾಷೆಯಲಿವರ್ಣಾಭಿಮಾನಿಗಳೊಲಿದು ಪೇಳಿಸಿದಈ ಸುಲಕ್ಷಣ ಕಾವ್ಯದೊಳಗ್ಯತಿಪ್ರಾಸಗಳಿಗೆ ಪ್ರಯತ್ನವಿಲ್ಲದೆಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||ಪ್ರಾಕೃತೋಕ್ತಿಗಳೆಂದು ಬರಿದೆಮಹಾಕೃತಘ್ನರು ಜರಿವರಲ್ಲದೆಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರುಶ್ರೀಕೃತೀಪತಿ ಅಮಲ ಗುಣಗಳುಈ ಕೃತಿಯೊಳುoಟಾದ ಬಳಿಕಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||ಶ್ರುತಿಗೆ ಶೋಭನಮಾಗದಡೆಜಡಮತಿಗೆ ಮಂಗಳವೀಯದಡೆಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯಮಥಿಸಿ ಮಧ್ವಾಗಮ ಪಯೋಬ್ಧಿಯಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||ಭಕ್ತಿವಾದದಿ ಪೇಳ್ದನೆಂಬಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದಯುಕ್ತಿ ಶಾಸ್ತ್ರ ವಿರುದ್ಧ ಶಬ್ದವಿಭಕ್ತಿ ವಿಷಮಗಳಿರಲುಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||ಆಶುಕವಿಕುಲ ಕಲ್ಪತರುದಿಗ್ದೇಶವರಿಯಲು ರಂಗನೊಲುಮೆಯದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನುಈ ಸುಲಕ್ಷಣ ಹರಿಕಥಾಮೃತಮೀಸಲರಿಯದೆ ಸಾರದೀರ್ಘದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||ಪ್ರಾಸಗಳ ಪೊಂದಿಸದೆ ಶಬ್ದಶ್ಲೇಷಗಳ ಶೋಧಿಸದೆ ದೀರ್ಘಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆದೂಷಕರು ದಿನದಿನದಿ ಮಾಡುವದೂಷಣೆಯೆ ಭೂಷಣಗಳೆಂದುಪದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||ಅಶ್ರುತಾಗಮ ಇದರ ಭಾವಪರಿಶ್ರಮವು ಬಲ್ಲವರಿಗಾನಂದಾಶ್ರುಗಳಮಳೆಗರೆಸಿ ಮರೆಸುವ ಚಮತ್ಕ್ರುತಿಯಮಿಶ್ರರಿಗೆ ಮರೆ ಮಾಡಿ ದಿವಿಜರಜಸ್ರದಲಿ ಕಾಯ್ದಿಪ್ಪರಿದರೊಳುಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||
🙏🙏🙏🙏
Toomelodius
ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ.🙏🙏🙏🙏🙏🙏
ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ
ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಹರಿಕಥಾಮೃತಸಾರ ಶ್ರೀಮದ್ಗುರುವರ
ಜಗನ್ನಾಥ ದಾಸರ ಕರತಲಾಮಲಕವನೆ
ಪೇಳಿದ ಸಕಲ ಸಂಧಿಗಳ
ಪರಮ ಪಂಡಿತ ಮಾನಿಗಳು
ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು
ತೋರಿ ಪೇಳುವದಲ್ಲ ಧರೆಯೊಳಗೆ||1||
ಭಾಮಿನೀ ಷಟ್ಪದಿಯ ರೂಪದಲೀ
ಮಹಾದ್ಭುತ ಕಾವ್ಯದಾದಿಯೊಳಾ
ಮನೋಹರ ತರತರಾತ್ಮಕ ನಾಂದಿ ಪದ್ಯಗಳ
ಯಾಮಯಾಮಕೆ ಪಠಿಸುವವರ
ಸುಧಾಮಸ ಕೈಪಿಡಿಯಲೋಸುಗ
ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||
ಸಾರವೆಂದರೆ ಹರಿಕಥಾಮೃತ
ಸಾರವೆಂಬುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ
ಸಾರಥಿಯ ಬಲಗೊಂಡು ಸಾರಾ
ಸಾರಗಳ ನಿರ್ಣೈಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||
ದಾಸವರ್ಯರ ಮುಖದಿ ನಿಂದು
ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ
ವರ್ಣಾಭಿಮಾನಿಗಳೊಲಿದು ಪೇಳಿಸಿದ
ಈ ಸುಲಕ್ಷಣ ಕಾವ್ಯದೊಳಗ್ಯತಿ
ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||
ಪ್ರಾಕೃತೋಕ್ತಿಗಳೆಂದು ಬರಿದೆ
ಮಹಾಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು
ಶ್ರೀಕೃತೀಪತಿ ಅಮಲ ಗುಣಗಳು
ಈ ಕೃತಿಯೊಳುoಟಾದ ಬಳಿಕ
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||
ಶ್ರುತಿಗೆ ಶೋಭನಮಾಗದಡೆ
ಜಡಮತಿಗೆ ಮಂಗಳವೀಯದಡೆ
ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ
ಮಥಿಸಿ ಮಧ್ವಾಗಮ ಪಯೋಬ್ಧಿಯ
ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||
ಭಕ್ತಿವಾದದಿ ಪೇಳ್ದನೆಂಬ
ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ
ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ
ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ
ವಿಭಕ್ತಿ ವಿಷಮಗಳಿರಲು
ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||
ಆಶುಕವಿಕುಲ ಕಲ್ಪತರು
ದಿಗ್ದೇಶವರಿಯಲು ರಂಗನೊಲುಮೆಯ
ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು
ಈ ಸುಲಕ್ಷಣ ಹರಿಕಥಾಮೃತ
ಮೀಸಲರಿಯದೆ ಸಾರದೀರ್ಘ
ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||
ಪ್ರಾಸಗಳ ಪೊಂದಿಸದೆ ಶಬ್ದ
ಶ್ಲೇಷಗಳ ಶೋಧಿಸದೆ ದೀರ್ಘ
ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ
ದೂಷಕರು ದಿನದಿನದಿ ಮಾಡುವ
ದೂಷಣೆಯೆ ಭೂಷಣಗಳೆಂದುಪ
ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||
ಅಶ್ರುತಾಗಮ ಇದರ ಭಾವ
ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ
ಮಳೆಗರೆಸಿ ಮರೆಸುವ ಚಮತ್ಕ್ರುತಿಯ
ಮಿಶ್ರರಿಗೆ ಮರೆ ಮಾಡಿ ದಿವಿಜರ
ಜಸ್ರದಲಿ ಕಾಯ್ದಿಪ್ಪರಿದರೊಳು
ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||
🙏🙏🙏🙏
Toomelodius