ಫಲಸ್ತುತಿ | Harikathamritasara 33 | Phalastuti | Shri Jagannatha Dasaru | Dr Vidyabhushana

Поделиться
HTML-код

Комментарии • 4

  • @s.m.kuppi.9349
    @s.m.kuppi.9349 2 года назад +2

    ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ.🙏🙏🙏🙏🙏🙏

  • @kurudivedavyasa4311
    @kurudivedavyasa4311 Год назад +1

    ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ
    ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿ
    ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
    ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
    ಹರಿಕಥಾಮೃತಸಾರ ಶ್ರೀಮದ್ಗುರುವರ
    ಜಗನ್ನಾಥ ದಾಸರ ಕರತಲಾಮಲಕವನೆ
    ಪೇಳಿದ ಸಕಲ ಸಂಧಿಗಳ
    ಪರಮ ಪಂಡಿತ ಮಾನಿಗಳು
    ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು
    ತೋರಿ ಪೇಳುವದಲ್ಲ ಧರೆಯೊಳಗೆ||1||
    ಭಾಮಿನೀ ಷಟ್ಪದಿಯ ರೂಪದಲೀ
    ಮಹಾದ್ಭುತ ಕಾವ್ಯದಾದಿಯೊಳಾ
    ಮನೋಹರ ತರತರಾತ್ಮಕ ನಾಂದಿ ಪದ್ಯಗಳ
    ಯಾಮಯಾಮಕೆ ಪಠಿಸುವವರ
    ಸುಧಾಮಸ ಕೈಪಿಡಿಯಲೋಸುಗ
    ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||
    ಸಾರವೆಂದರೆ ಹರಿಕಥಾಮೃತ
    ಸಾರವೆಂಬುದೆಮ್ಮ ಗುರುವರ
    ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ
    ಸಾರಥಿಯ ಬಲಗೊಂಡು ಸಾರಾ
    ಸಾರಗಳ ನಿರ್ಣೈಸಿ ಪೇಳ್ದನು
    ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||
    ದಾಸವರ್ಯರ ಮುಖದಿ ನಿಂದು
    ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ
    ವರ್ಣಾಭಿಮಾನಿಗಳೊಲಿದು ಪೇಳಿಸಿದ
    ಈ ಸುಲಕ್ಷಣ ಕಾವ್ಯದೊಳಗ್ಯತಿ
    ಪ್ರಾಸಗಳಿಗೆ ಪ್ರಯತ್ನವಿಲ್ಲದೆ
    ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||
    ಪ್ರಾಕೃತೋಕ್ತಿಗಳೆಂದು ಬರಿದೆ
    ಮಹಾಕೃತಘ್ನರು ಜರಿವರಲ್ಲದೆ
    ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು
    ಶ್ರೀಕೃತೀಪತಿ ಅಮಲ ಗುಣಗಳು
    ಈ ಕೃತಿಯೊಳುoಟಾದ ಬಳಿಕ
    ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||
    ಶ್ರುತಿಗೆ ಶೋಭನಮಾಗದಡೆ
    ಜಡಮತಿಗೆ ಮಂಗಳವೀಯದಡೆ
    ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ
    ಮಥಿಸಿ ಮಧ್ವಾಗಮ ಪಯೋಬ್ಧಿಯ
    ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
    ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||
    ಭಕ್ತಿವಾದದಿ ಪೇಳ್ದನೆಂಬ
    ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ
    ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ
    ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ
    ವಿಭಕ್ತಿ ವಿಷಮಗಳಿರಲು
    ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||
    ಆಶುಕವಿಕುಲ ಕಲ್ಪತರು
    ದಿಗ್ದೇಶವರಿಯಲು ರಂಗನೊಲುಮೆಯ
    ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು
    ಈ ಸುಲಕ್ಷಣ ಹರಿಕಥಾಮೃತ
    ಮೀಸಲರಿಯದೆ ಸಾರದೀರ್ಘ
    ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||
    ಪ್ರಾಸಗಳ ಪೊಂದಿಸದೆ ಶಬ್ದ
    ಶ್ಲೇಷಗಳ ಶೋಧಿಸದೆ ದೀರ್ಘ
    ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ
    ದೂಷಕರು ದಿನದಿನದಿ ಮಾಡುವ
    ದೂಷಣೆಯೆ ಭೂಷಣಗಳೆಂದುಪ
    ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||
    ಅಶ್ರುತಾಗಮ ಇದರ ಭಾವ
    ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ
    ಮಳೆಗರೆಸಿ ಮರೆಸುವ ಚಮತ್ಕ್ರುತಿಯ
    ಮಿಶ್ರರಿಗೆ ಮರೆ ಮಾಡಿ ದಿವಿಜರ
    ಜಸ್ರದಲಿ ಕಾಯ್ದಿಪ್ಪರಿದರೊಳು
    ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||

  • @bhagyashrivijendra7561
    @bhagyashrivijendra7561 2 года назад +1

    🙏🙏🙏🙏

  • @appannamaster9080
    @appannamaster9080 2 года назад

    Toomelodius