News conference by ex-servicemen in Gadag as part of Kargil victory

Поделиться
HTML-код
  • Опубликовано: 3 окт 2024
  • Super Prathinidhi News DIGITAL channel
    News conference by ex-servicemen in Gadag as part of Kargil victory
    ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಗದಗದಲ್ಲಿ ಮಾಜಿ ಸೈನಿಕರಿಂದ ಸುದ್ದಿಗೋಷ್ಟಿ
    ಮುಂಬರುವ ಇದೆ ಜುಲೈ 26-ರಂದು ಆಚರಿಸಲಾಗುವ 25-ನೇ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಮುಂಡರಗಿ ಇವರು ಸುದ್ದಿಗೋಷ್ಟಿಯ ಮೂಲಕ ತಿಳಿಸಿದರು.
    ಅಂದು ಮೆರವಣಿಗೆಯು ಕಿತ್ತೂರು ಚೆನ್ನಮ್ಮ ಸರ್ಕಲ್ಲಿನಿಂದ ಪ್ರಾರಂಭವಾಗಿ ಟಾಂಗಾಕೂಟ,ಗಾಂಧಿ ಸರ್ಕಲ್ ಮಾರ್ಗವಾಗಿ ಕೆ. ಎಚ್.ಪಾಟೀಲ್ ಸಭಾ ಭವನದ ವರೆಗೆ ಸಾಗಿ NCC ಕೆಡಿಟ್ಸ್, ಸ್ಕೌಟ್ ಆಂಡ್ ಗೈಡ್ಸ್ ಹಾಗೂ ಕಲಾತಂಡಗಳು,ಮಾಜಿ ಸೈನಿಕರು ಹಾಗೂ ವೀರನಾರಿಯರ ತುಕಡಿಗಳೊಂದಿಗೆ ದೇಶಭಕ್ತಿ ಗೀತೆ ಹಾಗೂ ಜೈ ಘೋಷದೊಂದಿಗೆ ಬೈಕ್ ರ‍್ಯಾಲಿಯ ಮೂಲಕ ಜನ ಜಾಗೃತಿಯನ್ನು ಮೂಡಿಸಲಾಗುವುದು ಎಂದು ಬಸವಲಿಂಗಪ್ಪ ಹೇಳಿದರು.
    ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
    *ವರದಿ*✍️ಚಂದ್ರಶೇಖರ ಸೋಮಣ್ಣವರ

Комментарии •