ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ

Поделиться
HTML-код
  • Опубликовано: 4 апр 2024
  • ಲೋಕ ಕಲ್ಯಾಣಾರ್ಥ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ ಋತ್ವಿಕ್ ಗಣ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುಸಂಪನ್ನ.
    ಕಾಸರಗೋಡು ಜಿಲ್ಲೆಯ ಉಬ್ರಂಗಳ
    ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದ ಅಂಗವಾಗಿ ದಿನಾಂಕ 3 ಮಾರ್ಚ್ 2024 ಬುಧವಾರ ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾ ಪೂರ್ಣಾಹುತಿ, ಮಹಾ ಪೂಜೆ ಜರುಗಿತು.
    ಮುಂಜಾನೆ ಮಂಟಪ ದೇವರ ಪೂಜೆ, ಅರಣೀ ಸೂಕ್ತ ಪಠಣದಲ್ಲಿ, ಅರಣೀ ಮಥನ ದ್ವಾರಾ ಅಗ್ನಿ ಪ್ರಜನನ, ಆವಾಹನ, ಪೂಜನ ಸಹಿತ ಹೋಮ ಕುಂಡಗಳಲ್ಲಿ ಅಗ್ನಿ ಪ್ರತಿಷ್ಠೆ ನಡೆಯಿತು. ಸಪ್ತಶತೀ ಪಠಣ ದ್ವಾರಾ ಸಹಸ್ರ ಚಂಡಿಕಾಯಾಗ ಪ್ರಾರಂಭವಾಯಿತು.
    ಅದಾಗಲೇ ನೂರು ಜನ ಋತ್ವಿಜರ ಮುಖೇನ ಸಹಸ್ರ ಸಂಖ್ಯೆಯಲ್ಲಿ ಚಂಡೀ ಸಪ್ತಶತೀ ಪಾರಾಯಣ, ಹತ್ತು ಲಕ್ಷ ನವಾವರಣ ಜಪ ಸಂಪನ್ನಗೊಂಡು, ದಶಾಂಶ ಸಂಖ್ಯೆಯಲ್ಲಿ ತರ್ಪಣ, ಒಂದೇ ಸಮಯದಲ್ಲಿ ದಶ ಕುಂಡಗಳಲ್ಲಿ ನೂರು ಜನ ಋತ್ವಿಜರ ಮೂಲಕ ಒಂದು ಲಕ್ಷ ನವಾವರಣ ಮಂತ್ರ ಸಹಿತ ಆಜ್ಯ ಆಹುತಿ ನೀಡಲಾಯಿತು. ಬೆಲ್ಲ, ಅರಸಿನ, ಏಲಕ್ಕಿ , ಜಾಯೀಕಾಯೀ, ತುಪ್ಪ ಸಹಿತವಾಗಿ ಒಂದು ಸಾವಿರದ ಮುನ್ನೂರು ಕೆ.ಜಿ.ಅಕ್ಕಿಯಿಂದ ತಯಾರಿಸಲಾದ ಪಾಯಸವನ್ನು ಎಪ್ಪತ್ತು ಸಾವಿರ ಆಹುತಿಯನ್ನು ಸಪ್ತಶತೀ ಪಠಣ ದ್ವಾರಾ ಅಗ್ನಿಗೆ ಸಮರ್ಪಿಸಿ ಹೋಮ ನೆರವೇರಿತು.
    ತಲಾ ಬುಟ್ಟಿಗಳಂತೆ ತೆಂಗಿನಕಾಯಿ, ಕೊಬ್ಬರಿ, ಬಿಲ್ವದ ಕಾಯಿ, ಇಕ್ಷುದಂಡ, ಬಾಳೇ ಹಣ್ಣು ಗೊನೆಗಳು, ಮಹಾಳುಂಗ ಫಲ ಸಹಿತ ಹಣ್ಣು ಹಂಪಲು, ವಿವಿಧ ಒಣ ಹಣ್ಣುಗಳು, ಶ್ರೀ ಗಂಧ ಕೊರಡು, ಏಲಕ್ಕಿ, ಜಾಯೀಕಾಯೀ, ಲವಂಗ ಇತ್ಯಾದಿ ಸುಗಂಧ ದ್ರವ್ಯಗಳು, ಅರಳು, ಪಂಚಾಮೃತ, ಎಳ್ಳು, ಪಲಾಶ ಪುಷ್ಪ, ವಾಯನ, ವಸ್ತ್ರ, ಅಡಿಕೆ, ವೀಳ್ಯದೆಲೆ, ಹೂ, ಹಿಂಗಾರದೊಂದಿಗೆ
    ಸಹಸ್ರ ಚಂಡಿಕಾ ಯಾಗದ ಮಹಾ ಪೂರ್ಣಾಹುತಿ, ಆರತೀ, ಚಂಡಿಕಾ ಯಾಗ ಮಂಟಪದಲ್ಲಿ ಪೂಜೆ ನೆರವೇರಿತು. ಕರ್ಮಾಂಗ ಸಮಾಪ್ತಿ ಯಲ್ಲಿ, ಅದಾಗಲೇ ನೂರು ಜನ ಕನ್ನಿಕೆಯರ, ನೂರು ಜನ ಸುವಾಸಿನಿಯರ ಆರಾಧನೆ, ಹತ್ತು ದಂಪತಿ ಪೂಜಾ ಸಂಪನ್ನಗೊಂಡಿತು. ಬ್ರಾಹ್ಮಣ ಪೂಜೆ, ದಕ್ಷಿಣಾ ಪ್ರದಾನ, ಮಂತ್ರಾಕ್ಷತೆ, ಆಶೀರ್ವಚನ, ಪ್ರಸಾದ ವಿತರಣೆ ಅವಭೃತ ಸ್ನಾನ ನಡೆದು, ಬ್ರಾಹ್ಮಣ ಸಮಾರಾಧನೆ, ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಭಕ್ತ ಗಣಕ್ಕೆ ಅನ್ನ ಸಂತರ್ಪಣೆ ನಡೆಯಿತು.
    ಈ ಸುಸಂದರ್ಭದಲ್ಲಿ
    ಎಡನೀರುಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ,
    ದಿವ್ಯ ಸಾನ್ನಿಧ್ಯ ವಹಿಸಿದ್ದರು.
    ಯಾಗದ ಅನುಷ್ಠಾನ ಕರ್ಮಾಂಗದ ನೇತೃತ್ವವನ್ನು ಶ್ರೀ ಸೂರ್ಯನಾರಾಯಣ ಭಟ್ ವಹಿಸಿ, ಪ್ರಧಾನ ಆಚಾರ್ಯತ್ವದಲ್ಲಿ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರು ವಹಿಸಿ, ವೈದಿಕರಾದ ಶ್ರೀ ರಾಮ ಭಾರದ್ವಾಜ್ ತಂಡ, ವಿವಿಧ ರಾಜ್ಯಗಳ ವೈದಿಕರು ಭಾಗವಹಿಸಿ ಕಾರ್ಯಕ್ರಮ ಛಂದಗಾಣಿಸಿದರು.
    ಹರಿದು ಬಂದ ಜನಸಾಗರ
    ಊರ ಪರವೂರ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿದ ಜನರು ಬುಧವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಕುಟುಂಬ ಸಹಿತವಾಗಿ, ಮಲಬಾರ್ ದೇವಸ್ವಂ ಬೋರ್ಡ್ ಅಧಿಕಾರಿಗಳು, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಲೋಕಸಭಾ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಮೊದಲಾದ ಅನೇಕ ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
    ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ, ವೇದಮಾತ ಟ್ರಸ್ಟ್ ಹಾಗೂ ಯಾಗ ಸಮಿತಿ ಅಧ್ಯಕ್ಷ ತಲೇಖ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಆಡಳಿತ ಮೊಕ್ತೇಸರರು ಭಾಗವಹಿಸಿ ಕಾರ್ಯಕ್ರಮ ಸಾಂಗವಾಗಿ ಸುಸಂಪನ್ನಗೊಂಡಿತು.
    ಶ್ರೀ ಕ್ಷೇತ್ರದಲ್ಲಿ ಮಾ.27ರಿಂದ ಏ.3ರ ವರೆಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮುಕ್ತಾಯಗೊಂಡಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೂರಾರು ವೈದಿಕರ, ಸ್ವಯಂ ಸೇವಕರ ಹಗಲಿರುಳು ಪರಿಶ್ರಮದ ಫಲವಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು - ಎ.ಜಿ.ಶರ್ಮಾ, ಆಡಳಿತ ಮೊಕೇಸರರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ ಇಂದಿಲ್ಲಿ ಹೇಳಿದರು.
    Mangalore Samachar..
    / @mangaloresamachar9338

Комментарии •