ಮನಾಂತರಾಳದ ಮಾತುಗಳು, ಶ್ರೀಯುತ ಎಂ ಗಂಗಾಧರ ಭಿಡೆ, ಕೊಲ್ಲೂರು, 65ರ ಸಂಭ್ರಮದಲ್ಲಿ ನಿವೃತ್ತಿ ಜೀವನ....

Поделиться
HTML-код
  • Опубликовано: 12 сен 2024
  • ಕೊಲ್ಲೂರು ಶ್ರೀಯುತ ಎಂ. ಗಂಗಾಧರ ಭಿಡೆಯವರ ನಿವೃತ್ತಿ, ಬೀಳ್ಕೊಡುಗೆ ಸಮಾರಂಭ. ಭಿಡೆ 65 ರ ಸಂಭ್ರಮ 2024 ಮುಕಾಂಬಿಕಾ ಸನ್ನಿಧಿಯಲ್ಲಿ ಸುಸಂಪನ್ನ..
    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶ್ರೀ ಎಂ. ಗಂಗಾಧರ ಭಿಡೆಯವರು ನಿವೃತ್ತಿ ಹೊಂದಿರುವ ಪ್ರಯುಕ್ತ ದೇವಳ ವತಿಯಿಂದ ಬೀಳ್ಕೊಡುಗೆ, ದಂಪತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹೀಗೆ 4 ದಿನಗಳ ಪರ್ಯಂತ ನೆರವೇರಿತು.
    ದಿನಾಂಕ ಮೇ 28,29 2024 ರಂದು ಸ್ವಗೃಹದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರೀ ಕುಲದೇವರೀಗೆ ಗಣಹೋಮ, ರುದ್ರಾಭಿಷೇಕ, ನಾಗ ದೇವರಿಗೆ ಪವಮಾನ ಅಭಿಷೇಕ, ಆಯುಷ್ಯ ಹೋಮ, ಅನ್ನ ಸಂತರ್ಪಣೆ ಜರುಗಿತು.
    ಶ್ರೀ ಮುಕಾಂಬಿಕಾ ದೇವಳ ಸನ್ನಿಧಿಯ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕೇಮಾರು ಶ್ರೀ ಶ್ರೀ ಈಶ ವಿಠ್ಠಲ ದಾಸ ಶ್ರೀ ಗಳಿಂದ ಆಶೀರ್ವಚನ ಮಂತ್ರಾಕ್ಷತೆ ಜರುಗಿತು.ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ಭಜನೆ, ಕುಣಿತ ಭಜನೆ, ಹರಿಕಥೆ, ಭಕ್ತಿಗೀತೆ, ಭರತನಾಟ್ಯ,ಸನ್ಮಾನಗಳು ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು.

Комментарии •