ಆ-ಹಾ ಕಾರದ “ಆಹಾ!" ಪದ್ಯ
HTML-код
- Опубликовано: 12 сен 2024
- ಅಮೆರಿಕನ್ನಡಿಗ ಕವಿ ಹಂ.ಕ.ರಾಮಪ್ರಿಯನ್ ಅವರು ಬರೆದಿರುವ ಒಂದು ಸರಳ ಪದ್ಯ ಇಲ್ಲಿದೆ. ಕನ್ನಡ ಭಾಷೆಯಲ್ಲಿ ಆ-ಹಾ ಕಾರ ಉಚ್ಚಾರ ಮತ್ತು ಬರವಣಿಗೆಯಲ್ಲಿ ಸಮಸ್ಯೆಯಿರುವವರು ಇದನ್ನು ಕಲಿತರೆ ಸಮಸ್ಯೆ ಪರಿಹಾರವಾಗುವುದು. ಚಿಕ್ಕಮಕ್ಕಳಿಗಂತೂ ಇದನ್ನು ಕಲಿಸಿದರೆ ಅವರಿಗೆ ಎಂದೆಂದಿಗೂ ಆ ಸಮಸ್ಯೆಯೇ ಬಾರದು! ರಾಗವಾಗಿ ಹಾಡಲಿಕ್ಕಾಗುವುದು ಈ ಪದ್ಯದ ಇನ್ನೊಂದು ಹೆಚ್ಚುಗಾರಿಕೆ. ಆದ್ದರಿಂದ ಇದನ್ನು ಶಾಲೆಗಳಲ್ಲಿ ನಿತ್ಯಪ್ರಾರ್ಥನೆಯಾಗಿಸಿದರೆ, ಸುದ್ದಿಮನೆಗಳಲ್ಲಿ ಕಡ್ಡಾಯವಾಗಿ ನಿತ್ಯ ಪ್ರಮಾಣವಚನ ಅಂತಾಗಿಸಿದರೆ, ಕರ್ನಾಟಕವನ್ನು ಅಗಾಧವಾಗಿ ತಟ್ಟಿರುವ ಆ-ಹಾಕಾರದ ಹಾಹಾಕಾರ ಸಂಪೂರ್ಣ ನಿರ್ನಾಮವಾಗುತ್ತದೆ.
ಉದಿಸಿಹನರುಣನು ಬರುತಿರುವನು ರವಿ ಬಿಡು ಹಾಸಿಗೆಯನು ನೀನ್ ಏಳು|
ಹರಿ ಹರಿ ಎನ್ನುತ ಭಜನೆಯ ಮಾಡುತ ಸವಿಮಾತುಗಳನು ನೀನ್ ಹೇಳು||
ಹೊಟ್ಟೆಯ ಪಾಡಿಗೆ ನೌಕರಿ ಮಾಡುವ ಭಾರವ ಬೆನ್ನಲಿ ನೀ ಹೇರಿ|
ಕೆಲಸಕೆ ಹೋಗೆಲೊ ವೇಗದಿ ಹೋಗುವ ಎಣ್ಣೆಯ ಗಾಡಿಯ ನೀನ್ ಏರಿ||
ಮನೆಗೆ ಸಂಜೆಯಲಿ ಬಂದನು ಗಂಡನು ಹೇಳಿದನ್ ಊಟವ “ನೀ ಹಾಕೇ"|
“ನೌಕರಿ ಮಾಡಿಯೆ ನಾನೂ ಬಂದಿಹೆನಡುಗೆಯ ಮಾಡ್"ಎಂದಳು ಆಕೆ||
ಅಡುಗೆಯ ಕೆಲಸದಿ ತೊಡಗಿರಲಮ್ಮನು ಬಳಲುತಲಿರುವುದು ಮಗು ಅತ್ತು|
ದಯಪರನಾಗುತ diaperಅ ಬದಲಿಸೆ ಮಹಡಿಯ ಮೇಗಡೆ ನೀ ಹತ್ತು||
ತಲೆಯೊಳು ಕರಿಕಿರಿಹುಳು ಬಂದಿರುವುದು ಅಮ್ಮಾ ನೀ ಹೇಳಿದು ಏನು?
ಕೆರೆವುದ ನಿಲ್ಲಿಸು ಔಷಧ ಹಾಕುತ ತಲೆಯನು ತೊಳೆವೆನು ಅದು ಹೇನು||
ಪುಸ್ತಕವೋದುತ ಕವಿತೆಯ ಬರೆಯುತಲಿರುವನು ಎಮ್ಮಯ ಹಿರಿ ಅಣ್ಣ|
ಹಸಿದಿಹ ಹೊಟ್ಟೆಯ ತುಂಬಲು ತಿನ್ನುವ ಸುಲಿಯುತ ಸಿಹಿ ಬಾಳೆಯ ಹಣ್ಣ||
ಎರವನು ಪಡೆಯಲು ಮನೆಕೆಲಸಗಳೊಳು ಬಿಡುವೆನು ಮನೆಯೊಳು ನಾನ್ ಆಳ|
ಜಡತನ ಪಿಡಿದಿರೆ ಕದಿಯುತ ನಡೆದಿರೆ ತರುವನು ಮನೆಗವ ಬಲು ಹಾಳ||
ಆಳದ ಬಾವಿಯ ನೀರನು ಸೆಳೆಯಲು ಬೇಕೆಲೊ ಬಲು ಉದ್ದದ ಹಗ್ಗ|
ನಮ್ಮನೆ ಹತ್ತಿರದಂಗಡಿಯೊಂದಿದೆ ಅಲ್ಲೇ ಕೊಳ್ಳೆಲೊ ಅದು ಅಗ್ಗ||
ಕುಟ್ಟಿದ ಬತ್ತವ ಮೊರದಲಿ ತೂರ್ದೊಡೆ ಒಮ್ಮೆಲೆ ಅಕ್ಕಿಯು ಹಾರುವುದು|
ಬೇಯಿಸಿ ಮೇಜಿನ ಮೇಗಡೆ ಇಟ್ಟರೆ ನಂತರ ಅಕ್ಕಿಯು ಆರುವುದು||
ಉರಿಬಿಸಿಲಿನ ಧಗೆ ಹೆಚ್ಚುತ ಬಂದರೆ ಮರದೊಳು ಹಕ್ಕಿಯು ಆರುವುದು|
ಓಡುತ ಬರುತಿಹ ಮಕ್ಕಳ ಗಲಭೆಗೆ ಬೆದರುತ ಹಕ್ಕಿಯು ಹಾರುವುದು||
ಬೆಳೆದಿದೆ ಹರಡಿದೆ ನೆರಳನು ಕೊಡುತಿದೆ ಹೆಸರಿದೆಯೊಂದದಕದೆ ಆಲ|
ಬೆಳೆಯಲು ಕರುವಿಗೆ ದಿನದಿನ ಕೊಡುವುದು ತೃಣವುಣುತಲಿ ದನ ನೊರೆ ಹಾಲ||
ಹುಲ್ಲನು ಮೇಯುತ ಜೊಲ್ಲನು ಸುರಿಸುತ “ಬ್ಯಾ ಬ್ಯಾ" ಎನ್ನುವುದದು ಆಡು|
ಮೆಲ್ಲನೆ ನಡೆಯುತ ನಲ್ಲನ ಸನಿಹಕೆ ಬರುತಿರುವಾಡಿಗೆ ಅದೆ ಹಾಡು||
ನಮ್ಮೂರ್ ಚೆಂದವು ಎಲ್ಲ ಋತುಗಳೊಳು ಬೆಚ್ಚಗೆ ಇರುವುದು ಹವೆ ಅಲ್ಲಿ|
ಗೋಡೆಯ ಮೇಗಡೆ ಕುಳಿತು ಸಂತಸದಿ ಲೊಚಲೊಚಗುಟ್ಟುವುದಾ ಹಲ್ಲಿ||
ಹುಣ್ಣಿಮೆ ಬಾನೊಳು ಬೆಣ್ಣೆಯ ಬಣ್ಣದ ಬೆಳಕನು ಚೆಲ್ಲುವನವ ಇಂದು|
ದಿನದಿನ ಭಾನುವು ಹೋಗಿರೆ ಮುಂದಕೆ ಓಡುತ ಪೋಗುವನ್ ಅವ ಹಿಂದು||
ಮತಗಳ ಹೆಸರಲಿ ಕೊಲ್ಲುವ ಜನಗಳು ಜಗದೊಳು ಹೆಚ್ಚಾಗಿಹರ್ ಇಂದೂ|
ಮತಗಳ ಸಮತೆಯ ನಂಬುತ ಶಾಂತಿಯ ಜೀವನ ನಡೆಸುವ ನರ ಹಿಂದೂ||
ಓದನು ಓದಿರೆ ಕೆಲಸವ ಮಾಡಿರೆ ಬೇಸರ ಹೋಗಲು ನೀನ್ ಆಡು|
ಹರಿಯನು ಭಜಿಸುತ ಮನವನು ತಣಿಸುತ ದಾಸರ ಪದಗಳ ನೀ ಹಾಡು||
ಎನ್ನೀ ಕವಿತೆಯ ಮೆಚ್ಚಿಹ ಜನಗಳು ‘ಆಹಾ!’ಕಾರವ ಮಾಡುವರು|
ಎನ್ನೀ ಕವಿತೆಯ ಮೆಚ್ಚದ ಜನಗಳು ಹಾಹಾಕಾರವ ಮಾಡುವರು||
ಬರೆದವರು: ಹಂ.ಕ.ರಾಮಪ್ರಿಯನ್; ಕ್ಯಾಲಿಫೋರ್ನಿಯಾ, ಅಮೆರಿಕ.
ಹಾಡಿದವರು: ಅನೀಷಾ ಮತ್ತು ಅದಿತಿ; ಬೆಂಗಳೂರು, ಭಾರತ
====
ನಿಜವಾಗಿ ಎಷ್ಟು ಸ್ವಚ್ಛವಾಗಿ, ಸ್ಪಷ್ಟವಾಗಿದೆ ಉಚ್ಚಾರ. ಕಷ್ಟದ ಸಾಲುಗಳು........ಎಲ್ಲಾ ಮಾಧ್ಯಮದವರಿಗೆ ಮೊದಲು ಓದಲು ಹೇಳಿ. ಬಹುಶಃ ನಾವು ಕಿವಿ ಮುಚ್ಚಿಕೊಳ್ಳಬೇಕಾದೀತು.
ನಮ್ಮ ಮುಂದಿನ ಪೀಳಿಗೆ ಈ ರೀತಿ ಸ್ವಚ್ಛ ಕನ್ನಡ ಭಾಷೆ ಮಾತಾಡಿದರೆ, ಮುಂದೆ ಇವರೇ ಮಾಧ್ಯಮಗಳಲ್ಲಿ ಸ್ಪಷ್ಟ ಮಾತನಾಡಬಹುದು. ಬರೆದವರಿಗೂ, ಹಾಡಿದ ಪುಟ್ಟ ಮಕ್ಕಳಿಗೂ, ಹಾಗೂ ಸ್ವಚ್ಛ ಕನ್ನಡ ಭಾಷೆಯನ್ನು ಹರಡುತ್ತಿರುವ ಶ್ರೀ ವತ್ಸ ಜೋಷಿಯವರಿಗೂ ನಮ್ಮೆಲ್ಲರ ಅಭಿನಂದನೆಗಳು.
ಆಹಾ!! ಸ್ಪಷ್ಟ ಉಚ್ಚಾರಣೆಯೊಂದಿಗೆ ಬಹಳ ಚೆನ್ನಾಗಿ ಹಾಡಿದ್ದಾರೆ. 👏👏👏
ಆಹಾ... ಪುಟಾಣಿಗಳ ಸ್ಪಷ್ಟ ಉಚ್ಚಾರಣೆ ಖುಷಿ ನೀಡಿತು. ಅದಿತಿ, ಅನೀಷಾರಿಗೆ ಪ್ರೀತಿಯ ಚಪ್ಪಾಳೆ 👏👏👏
Beautiful
ಧನ್ಯವಾದಗಳು ಸರ್, ನಿಜಕ್ಕೂ ಆನಂದವಾಯಿತು. "ಆ" ಕಾರ ಹಾಗೂ "ಹಾ" ಕಾರ ಕೇಳಿ ಆಹ್ಲಾದಕರ ವಾಯಿತು
ಸುಂದರ ಪದ್ಯ ಸುಂದರ ಹಾಡು
ಉತ್ತಮವಾಗಿತ್ತು
ತುಂಬ ಚೆನ್ನಾಗಿದೆ
amazing ...@
ಮಕ್ಕಳ ಮಾತು ಚಂದವಾಗಿತ್ತು
ಕೇಳಲೆಷ್ಟು ಸುಖ!
ಕನ್ನಡ ವಾಹಿನಿಗಳ ಸ್ಟುಡಿಯೋ ಗೋಡೆಗಳಲ್ಲಿ ಈ ಹಾಡನ್ನು ಬರೆದು ಅಂಟಿಸಬಹುದಲ್ಲವೇ?
ಆಹಾ ಅದಿತಿ
ಒಹೋ ಅನೀಷಾ🎉
👍
👍❤❤😊😊 ಪುಟಾಣಿಗಳಿಗೆ ಅಭಿನಂದನೆಗಳು 🌹🌹🌹
Sir, thanayana programme nalli keluva background song yaru compose madiddu sir matthe adara hesaru enu
Naukari kannada padavalla
ಕರಿಹಪ್ೇಜದುನಂೀರ