ದೇವ ಹನುಮ ಶೆಟ್ಟಿ - ದಾಸರ ಪದ II Deva Hanuma Shetti - Dasara Pada II Ashtamsha Varada Anjaneya Swamy II

Поделиться
HTML-код
  • Опубликовано: 3 окт 2024
  • ತಮಿಳು ನಾಡಿನ ಕೋಯಿಂಬತ್ತೂರಿನಲ್ಲಿರುವ ಶ್ರೀ ಅಷ್ಟಾಂಷ ವರದ ಆಂಜನೇಯ ಸ್ವಾಮಿಗೆ ಪೂಜೆ ಮತ್ತು ಮಹಾ ಮಂಗಳಾರತಿ ದರ್ಶನ ಪಡೆದು ಆ ಹನುಮಂತನ ಕೃಪೆಗೆ ಪಾತ್ರರಾಗಿ 🙏🙏🙏
    ಹಾಗೆಯೇ, ಶ್ರೀ ಶ್ಯಾಮಸುಂದರ ದಾಸರು ಹನುಮಂತನ ಮೇಲೆ ರಚಿಸಿರುವ ಒಂದು ಅತ್ಯದ್ಭುತವಾದ ದಾಸರ ಪದವನ್ನು ಶ್ರೀ ರಾಯಚೂರು ಶೇಷಗಿರಿ ದಾಸರು ಬಹಳ ಸೊಗಸಾಗಿ, ಭಕ್ತಿಪೂರ್ವಕವಾಗಿ ಹಾಡಿದ್ದಾರೆ, ಕೇಳಿ ಆನಂದಿಸಿರಿ 🙏🙏🙏
    ಹಾಡಿನ ಸಾಹಿತ್ಯ :
    ದೇವಾ ಹನುಮ ಶೆಟ್ಟಿ|ರಾಯಾ ಜಗಜಟ್ಟಿ | ಕಾವೋದು ಭಾವಿ ಪರಮೇಷ್ಠಿ ||ಪ||
    ಪಾವನ ಚರಿತ ಸಂಜೀವನ ಗಿರಿಧರ | ಪಾವಮಾನಿ ಕರುಣಾವ- ಲೋಕನದಿ|ನೀ ಒಲಿಯುತ ಸದಾವಕಾಲ ತವ | ತಾವರೆ ಪದಯುಗ ಸೇವೆಯ ಕರುಣಿಸೋ||ಅ.ಪ||
    ವಾನರ ಕುಲನಾಯಕ|ಜಾನಕಿಶೋಕ ಕಾನನ ತೃಣಪಾವಕ| ಹೀನ ಕೌರವ ನಾಶಕ ಸನ್ಮನಿ ತಿಲಕ|ಆನಂದತೀರ್ಥ ನಾಮಕ || ಕೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ | ಮಾಣದ ಅನುದಿನ ಪಾಣಿ ಪಿಡಿದು ಪೊರೆ | ಸ್ಥಾಣುಜನಕ ಗೀರ್ವಾಣ ವಿನುತ ಜಗತ್ಪ್ರಾಣ ರಮಣ ಕಲ್ಯಾಣ ಮೂರುತಿ ||೧||
    ಮರುತ ನಂದನ ಹನುಮ|ಪುರಹರರೋಮ|ಪರಮ ಪುರುಷ ಶ್ರೀಭೀಮಾ|ಕರುಣಾಸಾಗರ ಜಿತಕಾಮ|ಸದ್ಗುಣ ಭೌಮ| ಪರವಾದಿ ಮತವ ನಿರ್ನಾಮ|ಗಿರಿಸುತ ಪಾಲಕ ಜರಿಜ ವಿನಾಶಕ ಹರಿಮತ ಸ್ಥಾಪಕ ದುರಿತ ವಿಮೋಚಕ|ಶರಣ ಜನರ ಸುರತರು ಭಾರತಿವರ ಮರೆಯದೆ ಪಾಲಿಸೋ ನಿರುಪಮ ಚರಿತ||೨||
    ದಿಟ್ಟ ಶ್ರೀ ಶ್ಯಾಮಸುಂದರ ವಿಠಲ ಕುವರ ದುಷ್ಟ ರಾವಣ ಮದಹರಾ| ಜಿಡ್ಡು ಪೂರ್ವಜ ವೃಕೋದರ|ರಣರಂಗ ಶೂರ|ಶಿಷ್ಟ ಜನರ ಉದ್ಧಾರ|ನಿಷ್ಠೆಯಿಂದ ಮನಮುಟ್ಟಿ ನಿನ್ನ ಪದ|ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳು|ಇಟ್ಟು ಸಲಹೋ ಸದಾ ಸೃಷ್ಟಿಮಂಡಲದಿ| ಪುಟ್ಟ ಗ್ರಾಮ ಬಲ್ಲಟಿಗಿ
    ವಾಸಾ || ೩ ||

Комментарии • 1