ಬರಪರಿಹಾರ ವಿಚಾರ...ವರದಿ ಕೊಟ್ಟಿರುವುದು ಸುಳ್ಳಾದರೆ ರಾಜಿನಾಮೆ ನೀಡುತ್ತೇನೆ...ನಿಜವಾದ್ರೆ ಅಮಿತ್ ಶಾ ಕೊಡ್ತಾ
HTML-код
- Опубликовано: 20 сен 2024
- ಬರಪರಿಹಾರ ವಿಚಾರ...ವರದಿ ಕೊಟ್ಟಿರುವುದು ಸುಳ್ಳಾದರೆ ರಾಜಿನಾಮೆ ನೀಡುತ್ತೇನೆ...ನಿಜವಾದ್ರೆ ಅಮಿತ್ ಶಾ ಕೊಡ್ತಾರಾ...ಸಿದ್ದರಾಮಯ್ಯ ಸವಾಲ್...
ಮೈಸೂರು,ಏ3,Tv10 ಕನ್ನಡ
ಕೇಂದ್ರ ಬರ ಪರಿಹಾರ ವಿಚಾರದಲ್ಲಿ
ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಡಿಸೆಂಬರ್ ತಿಂಗಳಿನಿಂದಲೆ ಹಲವು ವರದಿಕೊಟ್ಟಿದ್ದೇವೆ.
ಸುಳ್ಳಾದರೆ ನಾನು ರಾಜೀನಾಮೆ ಕೊಡುತ್ತೇನೆ.ಅವರು ಸುಳ್ಳು ಹೇಳಿದ್ದರೆ ಅಮಿತ್ ಶಾ ರಾಜೀನಾಮೆ ಕೊಡ್ತಾರಾ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
6 ತಿಂಗಳಿಂದ ವರದಿ ಕೊಡುತ್ತಲೇ ಬಂದಿದ್ದೇವೆ.
ಡಿಸೆಂಬರ್ 23 ರಂದು ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದ್ರು.
ಕೇಂದ್ರ ಅಧ್ಯಾಯನ ಸಮಿತಿ ವರದಿ ಕೊಟ್ಟಿತ್ತು.
ಇದನ್ನೆಲ್ಲ ನಾನು ಸಾಬೀತು ಮಾಡುವೆ.
ಒಬ್ಬ ಕೇಂದ್ರ ಗೃಹ ಸಚಿವರಾಗಿ ಅದ್ಹೇಗೆ ಸುಳ್ಳು ಹೇಳುತ್ತಾರೆ.
ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ.
ಬರ ಪರಿಹಾರ ಸಂಬಂಧ ಈ ಎಲ್ಲಾ ವಿವರಗಳನ್ನ ಸುಪ್ರೀಂ ಕೋರ್ಟಿಗೆ ಕೊಟ್ಟಿದ್ದೇವೆ.
ಎನ್.ಡಿ.ಆರ್.ಎಫ್ ಶಿಫಾರಸ್ಸು ಮಾಡಿದ್ದಾರೆ.
ಬರ ಪರಿಹಾರ ಹಣ ಕೊಡಲೇಬೇಕು.
ಇದು ಕೇಂದ್ರ ಸರ್ಕಾರದ ಹಣ ಅಲ್ಲ,ರಾಜ್ಯದ ಹಣ.
೫ ವರ್ಷಕ್ಕೆ ಎನ್.ಡಿ.ಆರ್ಎಫ್ ನಲ್ಲಿ ಹಣ ಮೀಸಲಿಟ್ಟಿರುತ್ತಾರೆ.
ಖರ್ಚು ವೆಚ್ಚದ ಬಗ್ಗೆ ಹಣಕಾಸು ಆಯೋಗ ಶಿಫಾರಸು ಮಾಡುತ್ತೆ.
ಇಂತವರಿಗೆ ಮತ ಹಾಕಬಾರದು, ಜನರು ಬುದ್ದಿ ಕಲಿಸಬೇಕು ಎಂದು
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು...