ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬAಧಿಸಿ ಮುಸ್ಲಿಂ ಸಂಘಟನೆಯಿAದ ಪತ್ರಿಕಾಗೋಷ್ಟಿ
HTML-код
- Опубликовано: 12 сен 2024
- ಕಾರ್ಕಳದಲ್ಲಿ ಶುಕ್ರವಾರ ಸಂಜೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬAಧಿಸಿ ಮುಸ್ಲಿಂ ಸಂಘಟನೆಯಿAದ ಕಾರ್ಕಳದ ಪ್ರಕಾಶ್ ಇಂಟರ್ನಾ್ಯಷನಲ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಶರೀಪ್, ಪ್ರಕರಣಕ್ಕೆ ಸಂಬAದಿಸಿ ಈಗಾಗಲೇ ಆರೋಪಿ ಅಲ್ತಾಫ್ ಬಂಧನವಾಗಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಾಗರೀಕ ಸಮುದಾಯ ಹೊಣೆಗಾರರಲ್ಲ. ಅಲ್ತಾಫ್ ಓರ್ವ ನಾಮಧಾರಿ ಮುಸ್ಲಿಂ, ಜೀವನದಲ್ಲಿ ಯಾವತ್ತೂ ಮಸೀದಿ ಬಾಗಿಲು ನೋಡಿದವನಲ್ಲ. ಪ್ರಕರಣಕ್ಕೆ ಸಂಬAದಿಸಿ ಹಿಂದೂ ಮುಸ್ಲಿಂ ಎಲ್ಲರೂ ಐಕ್ಯತೆಯಿಂದ ನಿನ್ನೆ ಪೊಲೀಸ್ ಠಾಣೆಯಲ್ಲಿ ಸೇರಿದ್ದೆವು, ಆರೋಪಿ ಅಲ್ತಾಫ್ ಗೆ ಸೂಕ್ತ ಕಾನೂನಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಕಾರ್ಕಳದಲ್ಲಿ ಹಿಂದೂ ಮುಸ್ಲಿಂ ಬೇದಭಾವವಿಲ್ಲದೆ ಸೌಹಾರ್ದತೆಯ ಜೀವನ ನಡೆಸುತ್ತಿದ್ದೇವೆ. ನಾಮದಾರಿ ಮುಸ್ಲಿಂ ನಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಳಂಕವಾಗಿದೆ ಸಮುದಾಯದಿಂದ ಖೇದ ವ್ಯಕ್ತ ಪಡಿಸಿದರು.ಆರೋಪಿ ಅಲ್ತಾಫ್ ಹಲವಾರು ಕೃತ್ಯಗಳಲ್ಲಿ ಭಾಗಿಯಾದವ. ಹಿಂದೆಯು ಯುವತಿಯ ಕಿಡ್ನಾಪ್ ಮಾಡಿ ಸಾರ್ವಜನಿಕರಿಂದ ಪೆಟ್ಟು ತಿಂದಿದ್ದಾನೆ. ಆರೋಪಿಗಳಿಗೆ ಸೂಕ್ತ ಕಾನೂನಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ರಿಜಿಸ್ಟರ್ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕ ಅಧ್ಯಕ್ಷ ನಾಸಿರ್ ಶೇಕ್, ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಷಾಕ್ ಅಹ್ಮದ್ ,ಕಾರ್ಕಳ ಮುಸ್ಲಿಂ ಫೆಡರೇಷನ್ ಅಧ್ಯಕ್ಷ ಶಬ್ಬೀರ್ ಅಹ್ಮದ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಜೆಸಿಸ್ ವಲಯ್ಯಾಧ್ಯಕ್ಷ ಸಮ್ಮದ್ ಖಾನ್ ಸೇವಾದಳದ ಕಾರ್ಕಳ ತಾಲೂಕು ಅಧ್ಯಕ್ಷ ಅಬ್ದುಲ್ ಶೇಕ್ ಉಪಸ್ಥಿತರಿದ್ದರು.
#udupi #mangalore #spandanatv #kannadanews #news #spandana