ವಾರಕ್ಕೊಂದು ಕನ್ನಡ ಹಾಡು ಸಂಚಿಕೆ 30

Поделиться
HTML-код
  • Опубликовано: 10 фев 2025
  • ವಾರಕ್ಕೊಂದು ಕನ್ನಡ ಹಾಡು - 30 ನೇ ಸಂಚಿಕೆ
    ಕೆ ಕೆ ಎನ್ ಸಿ
    ಎಲ್ಲರಿಗೂ ನಮಸ್ಕಾರ,
    ಜುಲೈ ತಿಂಗಳ ವಿಷಯ :
    ಗುರುವಂದನೆ ಮತ್ತು ಜಗನ್ನಾಥಸ್ತುತಿ
    ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ (ಹೆಚ್ಚೆಸ್ವಿ) ಯವರು ರಚಿಸಿರುವ 'ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ' ಭಾರತೀಯ ಸಂಸ್ಕೃತಿಯ ಸಾರವನ್ನು ಬಿಂಬಿಸಿದೆ. ಜೀವನದಲ್ಲಿ ಸಾರ್ಥಕ ಮಾರ್ಗ ತೋರಿಸುವಂತೆ ಗುರು ಕೃಪೆ ಇರಲಿ ಎಂಬ ಪ್ರಾರ್ಥನೆ ಇದೆ ಈ ಸುಪ್ರಸಿದ್ದ ಕವನದಲ್ಲಿ.
    ಜನಪ್ರಿಯ ಕವಿ ಹೆಚ್ಚೆಸ್ವಿಯವರಿಗೆ ಈ ತಿಂಗಳು 80 ತುಂಬಿತು. ಕನ್ನಡ ಕೂಟ ಅವರಿಗೆ ಈ ವೇದಿಕೆ ಮೂಲಕ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದೆ.
    ನಮ್ಮ ಬೇ ಏರಿಯಾದ ಗಾಯಕಿ ಶ್ರೀಮತಿ ಶೋಭಲತಾ ಪಟ್ಟಣಶೆಟ್ಟಿ ಈ ಹಾಡನ್ನು ಬಹಳ ಮಧುರವಾಗಿ ಹಾಡಿದ್ದಾರೆ.
    ನೀವು ಹಾಡುತ್ತೀರಾದರೆ, ನೀವು ಹಾಡಿರುವ video ಒಂದನ್ನು ನಿಮ್ಮ Google driveಗೆ upload ಮಾಡಿ, ಈ ಫಾರಂ ತುಂಬಿರಿ. forms.gle/TGkE...
    ವಿ. ಸೂ.: ಅಂತಿಮ ಆಯ್ಕೆ ನಮ್ಮ ತಂಡಕ್ಕೆ ಬಿಟ್ಟದ್ದು. ಎಂದಿನಂತೆ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.
    ಇಗೋ ಇಲ್ಲಿದೆ ಈ ವಾರದ ಹಾಡು -
    ಇರಬೇಕು ಇರುವಂತೆ
    ಸಾಹಿತ್ಯ: ಡಾ. ಎಚ್.ಎಸ್. ವೆಂಕಟೇಶಮೂರ್ತಿ
    ಸಂಗೀತ - ರಾಘವೇಂದ್ರ ಬೀಜದಿ
    ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
    ಮಳೆ ಸುರಿಸಿ ಹಗುರಾದ ಮುಗಿಲಿನಂತೆ ||ಪ||
    ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
    ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
    ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
    ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು || 1 ||
    ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
    ತಣ್ಣಗಿನ ಆಸರೆಯ ನೆರಳ ಕೊಟ್ಟು
    ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
    ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು || 2 ||
    ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
    ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
    ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
    ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು || 3 ||
    ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
    ಹಾಲುತೆನೆಯಲಿ ಅಮೃತ ತುಂಬಿ ನದಿಯು
    ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
    ಹಾಗೆ ಕೊನೆಗಾಣಿಸು ಕೃಪೆಯನಿಟ್ಟು || 4 ||
    -

Комментарии • 1