ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education
HTML-код
- Опубликовано: 30 янв 2021
- ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು.
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.
ಬೇಂದ್ರೆಯವರ ಸಾಹಿತ್ಯ
ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ, 2019ರಲ್ಲಿಯೂ ಪ್ರಸಿದ್ಧವಾಗಿದೆ.
*ನೂರು ವರ್ಷದ ಹಿಂದಿನ ಕವನ - ಬೆಳಗು[೩]
ಬೆಳಗು(ಮೊದಲ ಪದ್ಯ)
ಮೂಡಲ ಮನೆಯಾ ಮುತ್ತಿನ ನೀರಿನ
ಎರಕ$ವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.
ನಾನು ಸಾಧನಕೇರಿಯವಳೇ ಸರ್. 6 ವರ್ಷದವಳಿದ್ದಾಗಿನಿಂದ 1973 ರಿಂದ ಅವರು ನಿಧನರಾಗುವವರೆಗೂ ಬೇಂದ್ರೆ ಅಜ್ಜಾ ಅವರ ಜೊತೆಗೆ ಪ್ರತಿನಿತ್ಯ ಭೇಟಿಯಾಗಿ ಮಾತನಾಡುತ್ತಿದ್ದೆ ಸರ್. ನನಗೆ ಈಗಲೂ ಹೆಮ್ಮೆ ಅನಿಸುತ್ತಿದೆ ಸರ್. 🙏🙏🙏🙏🙏
ಒಳ್ಳೆ ಕೆಲಸ ಮಾಡಿದಿರಿ ಸರ್. ಬೇಂದ್ರೆ ಬಹು ಎತ್ತರದ ಮಹಾಕವಿ . ಅವರ ಬಗ್ಗೆ ಹೆಚ್ಚು ಪ್ರಚಾರಗಳಿರಲಿಲ್ಲ.ನಾನು ಕನ್ನಡ ಪ್ರಾಧ್ಯಾಪಕಿ. ನನಗೆ ಬೇಸರವಿತ್ತು. ಉತ್ತಮ ಕಾರ್ಯಕ್ರಮ.
ಸರಸ್ವತಿ ಪುತ್ರ, ಇವರ ಕನ್ನಡದ ಜ್ಞಾನ ಅದ್ಭುತ
I was a student of Suresh Kulkarni sir in Karnataka High School Dharwad During 2002 to 2004. He taught us Science (Biology) and Mathematics. He is having Superb Teaching Skills. After long time Glad to see you sir. I feel proud that I was your student.
🙏 ವರ ಕವಿ ಬೇಂದ್ರೆ ಬಗ್ಗೆ ಎಷ್ಟು ಕೇಲಿದರೂ ಇ ನ್ನೂ ಬೇಕ್ ಅ ನಿಸ್ಟದ.ನಿಮಗೆ ಧನ್ಯ ವಾದಗಲು.
Kulkarni Sir , nimma ondu utube channel start Maadi nimge Bendre sahityada class Maadi , please 🙏🙏
ಶಬ್ದಗಾರುಡಿಗರ ಬಗ್ಗೆ ನಮಗೆ ಗೊತ್ತಿಲ್ಲದ ಹಲವು ಹೊಸ (ಮಾಹಿತಿ) ಶಬ್ದಗಳ ಸಂಗ್ರಹಿಸಿದಂತಾಯಿತು ಈ ಕಾರ್ಯಕ್ರಮ ವೀಕ್ಷಣೆಯಿಂದ.. ಧನ್ಯವಾದಗಳು ಸರ್..🙏🙏🙏
ನಾವು ಯಾಕ ಬೇಂದ್ರೆ ಅಜ್ಜಾರ ಕಾಲದಾಗ ಹುಟ್ಟಲಿಲ್ಲ ಅಂತ ಭಾಳ ಅನಸ್ತದ...
ಇರ್ಲಿ, ನಾವು ಅವರ ಜೋಡಿ ಇದ್ದವ್ರ ಅನುಭವದ ಮಾತ ಕೇಳಿ ೪೫ ನಿಮಿಷ ನಾವೂ ಅವರ ಜೋಡಿ ಇದ್ದಂಗ ಆಯ್ತು ನಮ್ಮ ಜನ್ಮ ಸಾರ್ಥಕ ಆಯ್ತು ಗುರುವೇ 🙏
❤
ಅದ್ಭುತ ಜ್ಞಾನ ತಮ್ಮದು🙏
ಹೃದಯ ಪೂರ್ವಕವಾಗಿ ಧನ್ಯವಾದಗಳು ಸರ್
ಬೇಂದ್ರೆ ಅವರ ಬಗ್ಗೆ ಇನ್ನೂ ಹೆಚ್ಚಿನ ತಿಳಿ ಬೇಕು ಅನಿಸುತ್ತಿದೆ ಸರ್
ಹೃದಯಪೂರ್ವಕ ಅಭಿಮಾನದ ಧನ್ಯವಾದಗಳು ಸರ್, ಬೇಂದ್ರೆ ಅಜ್ಜನವರ ಬಗ್ಗೆ ತಮ್ಮಯ ಅದ್ಬುತ ನುಡಿಗಳಲ್ಲಿ ಕೇಳಿ ಧನ್ಯನಾದೆ 🙏🙏💞💞🎤👏👏🌹🌹
ನೀವು ಹೇಳಿದ್ದು ನಿಜ ಸರ್.ಬೇಂದ್ರೆ ಮಹಾನ್ ಕವಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಕನ್ನಡಕ್ಕೂ ಗಣಿತಕ್ಕೂ ಇರುವ ಸಂಬಂಧ ಅದ್ಭುತ
Adbhut sr namm hemme bendre ❤❤🙏🙏
ನಮ್ಮ ಬೇಂದ್ರೆ ಒಬ್ಬರೇ....
Real VARA KAVI, bendre ajjanige kannadigaru chiraruni..🙏🙏
ನಮ್ಮ ತಂದೆಯವರ ನೆಚ್ಚಿನ ಸಹೋದ್ಯೋಗಿ ನೀವು, ಬಹಳ ಹೆಮ್ಮೆಯಿಂದ ನಿಮ್ಮಗೆ 🙏🙏🙏🙏ಬಹಳ ಒಳ್ಳೆಯ ವಿವರಣೆ
Made me drown into the memories of the great Soul. I used to attend his every lecture at DWR. ThanQ very much for taking me into the Bendre Worlds.
ಸರ್, ನಿಮ್ಮ ಮಾತಿಗೆ -ಉಪನ್ಯಾಸಕ್ಕೆವಂದನೆಗಳು. ಸ್ವಾರಸ್ಯಪೂರ್ಣ.
suresh kulkarni is great artist ..who learnt art from legend da ra bendre🙏
ತುಂಬಾ ಒಳ್ಳೆ ಸಂದೇಶ ಸಾರುವ ಕೆಲಸ ಮಾಡಿದ್ರಿ sir...TQ sir ree
ಅತ್ಯದ್ಭುತ ಮಾತು, ಧನ್ಯವಾದಗಳು
ಅವರಿಗೆ ಎಲ್ಲ ವಿಷಯಗಳ ಬಗ್ಗೆ ಇದ್ದ ಜ್ಞಾನ ನಮ್ಮ ಜಕ್ಕು ಅಧ್ಭುತ
ಅದ್ಭುತ ವಿವರಣೆ ಕುಲಕರ್ಣಿಯವರೇ. 🙏🙏🙏
ಅರ್ಥಗರ್ಭಿತ ಮಾತುಗಳು.,
ಅಭಿಮಾನದ ಅಭಿನಂದನೆಗಳು ಸರ🙏🏼
ವರ್ಕರಿ ಸಂಪ್ರದಾಯ ಅದ್ಬುತ
ಬೇಂದ್ರೆ ಒಂದು ಅದ್ಭುತ ಪ್ರತಿಭೆ
ಅದ್ಬತವಾದ ಕಲೆ ಗುರುಗಳೇ
Wonderful explanation sir 🙏 for your vast knowledge about varakavi Bendreji.
🙏🙏🙏🙏 ಸರ್ ತುಂಬಾ ಒಳ್ಳೆಯ ವಿಷಯ ತಿಳಿಸಿದಿರಿ
Thank you somunch
Super sir
ಅತ್ಯದ್ಭುತ ಗುರುಗಳೇ
ನಿಮ್ಮ ಕಲೆಯೂ ಅಧ್ಬುತ
ಅತ್ಯದ್ಭುತ ಸರ್
ಅದ್ಭುತ
Thank You Sir 💐💐💐
ಬೇಂದ್ರೆಯವರ ಕಾವ್ಯದ ವೈಖರಿ ಅದ್ಭುತ
Sweet memories.. sir
Amazing sir..
Simply wonderfull narration about D. R. Bendre by Suresh Kulkarni. 👌👌🙏👏
Thanks for your video sir🙏🙏🙏🙏🙏🙏🙏🙏🙏🙏🙏👏👏👏
Wow amazing sir
Awesome thank and awesome speech
Kulakarni mastarige 🙏🙏🙏❤️❤️
Excellent program
Loved it❤️
Thank you sir
Thank you very much for giving beautiful biography of Great shri Bendreji
Excellent, amazing wonderful sprr sakath wahhhhh thank u sir
Tq classic
Fantastic 👏 👏
Wowwweeee super sir
Tquuuuu
Loved your narration 🙏🏻
Superb sir
Tq sir
Thank you kulkarni Sir 🙏🙏🙏🙏
🙏🙏Sir, yestu chennagi helidri varakavi bendreyavar bagge tilisidakkagi nimage tumba dhanyavadagalu sir 🙏🙏
Nice n informative !!!
👌👌🙏🙏🙏
👌👌
Very good information Sir thank you so much
Super sir good information thank u.
Best program
Super super
Excellent sir
🙏 thanky soooooo much sir good information
🙏
😊Thank you so much sir 😊😊
super sir 🙏🙏🙏🙏🙏
Adbutha vaagmi kulkarni sir
❤❤
🙏🙏🙏
💝
Shri Shuresh Kulkarni Gurugalige Pranamagalu
🤝🤝🙏🙏
I'm this sir Student I'm so thankful to God 🙏
🙏🙏🙏🙏🙏
Obba olle kannada sahitiya bagge e dinna namma kannannu terisidiri sir
🥰
ವರಕವಿ ದ ರಾ ಬೇಂದ್ರೆ my boss
Jei karnataka mata🌱🌱🌿
ಅವರ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸುವುದು ಕಷ್ಟ ಎಂದು ತಿಳಿದಿದ್ದೇನೆ
Love you ajjara🥰🥰🥰
ಬೆದ್ದರೆ ಬೇಂದ್ರೆ ❤️
ಬೆದ್ದರೆ ಅಲ್ಲಪಾ ತಮ್ಮಾ..ಬೆಂದರೆ ಬೇಂದ್ರೆ
Vandanegalu! Sogasaada upanyasa!
Worth watching 46 mins
ನಮ್ಮ ದೊಡ್ಡ ಕಲಾಕಾರ್ ಮಾಸ್ಥರು...!
I met a suresh Kulkarni sir and a take autograph from them.
ವರಕವಿ 🙏 ಅಜ್ಜಾರ
ಹಸಿ ನಗುತ ಬಂದೆವ..
ನಸು ನಗುತ ಬಾಳೋಣ..
ತುಸು ನಗುತ ತೇರಳೊಣ..
ದ . ರಾ. ಬೇಂದ್ರೆ...🙏🙏🙏
🙏
🙏
Sir navu kuda bendrevaranne nodidantaaiyetu good information ok
ಬೇಂದ್ರಯವರಿಗೆ ನಮನಗಳು
ಅವರ ಧ್ವನಿ ಕೇಳಿ ಕಿವಿಗಳು ಸಾರ್ಥಕವಾಯಿತು
Sir, what to comment on your personality!
Shabdha garudiga namma
Bendhre ajja
Shabdhagala jothe
Ata adoru
ಗೊರಟಗಿ ಹೂ ಬೇರೆ. ಕನಕಾಂಬರ ಹೂ ಬೇರೆ ಸರ್.
ಭಾರೋ ಸಾಧನಕೇರಿಗೆ,,,
Nim chitra kalege ananta ನಮಾನಗಳು
ಅಂಬಿಕಾತನಯ ಮತ್ತೆ ಬಾ..... 😢
ಈ ನಿಮ್ಮ ಕಾರ್ಯಕ್ರಮವನ್ನು ನೋಡಿ, ನಮಗೂ ಕೂಡಾ ಬೇಂದ್ರೆಯವರ ಬಗ್ಗೆ PhD ಮಾಡಿದಂಗ ಆತ ಸರ.
🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏