ಕೃಷ್ಣ ಸಂಧಾನ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ತಾಳಮದ್ದಳೆ
HTML-код
- Опубликовано: 27 июн 2022
- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಉಜಿರೆ - ಇದರ ಬೆಳ್ಳಿ ಹಬ್ಬ ಪ್ರಯುಕ್ತ ಬೆಂಗಳೂರಿನಲ್ಲಿ ತಾಳಮದ್ದಳೆ ಪರ್ವ. ಕರ್ನಾಟಕ ಹೈಕೋರ್ಟಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಯಕ್ಷಗಾನ ತಾಳಮದ್ದಳೆ.
ಪ್ರಸಂಗ: ಕೃಷ್ಣ ಸಂಧಾನ
ಭಾಗವತರು: ಪಟ್ಲ ಸತೀಶ್ ಶೆಟ್ಟಿ
ಮದ್ದಳೆ: ಅಕ್ಷಯ ರಾವ್ ವಿಟ್ಲ
ಚೆಂಡೆ: ಶ್ರೀಶ ರಾವ್ ನಿಡ್ಲೆ
ಕೌರವ: ಉಜಿರೆ ಅಶೋಕ ಭಟ್ (ಕುರಿಯ ಪ್ರತಿಷ್ಠಾನದ ಬೆಳ್ಳಿಹಬ್ಬದ ಪ್ರಯುಕ್ತ ರಾಜಧಾನಿಯಲ್ಲಿ ಯಕ್ಷಗಾನ ತಾಳಮದ್ದಳೆ ಪರ್ವದ ಸಂಯೋಜಕರು)
ಶ್ರೀಕೃಷ್ಣ: ಸುಣ್ಣಂಬಳ ವಿಶ್ವೇಶ್ವರ ಭಟ್
ವಿದುರ: ಸಂಕದಗುಂಡಿ ಗಣಪತಿ ಭಟ್
ಸ್ಥಳ: ಬೆಂಗಳೂರು ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ 2022 ಜೂ.24ರಂದು ನಡೆದ ಭರ್ಜರಿ ಕೂಟ.
ವಿಡಿಯೊ: ಅವಿನಾಶ್ ಬೈಪಾಡಿತ್ತಾಯ
ಕ್ಯಾಮೆರಾ: ಐಫೋನ್ 13Pro
Subscribe: / digiyakshafoundation Развлечения
🚩 *ಕರ್ನಾಟಕದ ಉಚ್ಚ ನ್ಯಾಯಾಲಯದ (ಹೈಕೋರ್ಟ್) ವಕೀಲರ ಸಂಘದ ಸಭಾಂಗಣದಲ್ಲಿ ಮೊಳಗಿದ ಯಕ್ಷಶಿರೋಮಣಿ ಶ್ರೀ ಉಜಿರೆ ಅಶೋಕ್ ಭಟ್ ಸಾರಥ್ಯದ ಕುರಿಯ ವಿಠಲಶಾಸ್ತ್ರಿ ಪ್ರತಿಷ್ಠಾನದ ರಜತಪರ್ವದ , ಯಕ್ಷದ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ನಿಶಾನೆಗೆ ನೀರು ಹಾರಿಸಿದ🔥 ಯಕ್ಷಗಾನ ತಾಳಮದ್ದಳೆ*
💥 *ಶ್ರೀ ಕೃಷ್ಣ ಸಂಧಾನ*💥🚩
🔥 ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಂಸನೆ ಮಾಡಿದ
🚩 ನ್ಯಾಯಮೂರ್ತಿ ಪಿ. ಎಸ್ ದಿನೇಶ್ ಕುಮಾರ್ ಅವರು ಕಾರ್ಯಕ್ರಮದ ಉದ್ದಕ್ಕೂ ಆಸ್ವಾದಿಸಿ ಕೊನೆಯವರೆಗೂ ಇದ್ದು ಪ್ರಶಂಸನೀಯ ಮಾತುಗಳನ್ನು ಹೇಳಿದರು.
💥 ನ್ಯಾಯಮೂರ್ತಿ ಎಚ್.ಬಿ ಪ್ರಭಾಕರ್ ಶಾಸ್ತ್ರಿ ಅವರು ಕೂಡಾ ಪೂರ್ತಿ ತಾಳಮದ್ದಳೆಯನ್ನು ಆಸ್ವಾದಿಸಿ ಪ್ರಶಂಸಿಸಿದರು.
💥 ನ್ಯಾಯಮೂರ್ತಿ ಹೆಚ್.ಟಿ ನರೇಂದ್ರ ಪ್ರಸಾದ್
💥 ನ್ಯಾಯಮೂರ್ತಿ ಪಿ.ಎಮ್.ನವಾಜ್
💥 ನ್ಯಾಯಮೂರ್ತಿ ಅನಂತ ಹೆಗಡೆ
💥 ನ್ಯಾಯಮೂರ್ತಿ ಹೇಮಲೇಖಾ
💥ನ್ಯಾಯಮೂರ್ತಿ ಸಿಎಂ ಪೂಣಚ್ಚ
💥ನ್ಯಾಯಮೂರ್ತಿ ಪಿಎನ್ ದೇಸಾಯಿ
ಇವರೆಲ್ಲರ ಗೌರವ ಉಪಸ್ಥಿತಿಯಲ್ಲಿ...
🩸ಕಲೆಯ ಸೀಮೋಲ್ಲಂಘನದ ಬಗೆಗೆ ಹರ್ಷಿತರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಕೀಲರ ಸಂಘದ ಅಧ್ಯಕ್ಷರೂ ಹಿರಿಯ ನ್ಯಾಯವಾದಿಗಳೂ ಆದ *ಶ್ರೀ ವಿವೇಕ್ ಸುಬ್ಬಾರೆಡ್ಡಿ*
🩸ಎಡಿಷನಲ್ ಎಡ್ವಕೇಟ್ ಜನರಲ್ & ಮೆಂಬರ್ ಆಫ್ ನೇಷನಲ್ ಲೋ ಸ್ಕೂಲ್ *ಶ್ರೀ ಅರುಣ್ ಶ್ಯಾಂ*
🩸ಪ್ರಧಾನಿಗಳ ಗೌರವಕ್ಕೆ ಪಾತ್ರರಾದ ಇಸ್ರೋ ವಿಜ್ಞಾನಿ *ಶ್ರೀ ಗಣೇಶ್ ಶ್ಯಾನುಭೋಗ್*
🩸ನಿಕಟಪೂರ್ವ ಕೆ.ಪಿ.ಎಸ್.ಸಿ ಅಧ್ಯಕ್ಷರಾಗಿದ್ದ ವಿಶ್ರಾಂತ ಐಎಎಸ್ ಅಧಿಕಾರಿ, ಕಲಾಪೋಷಕರಾದ
*ಶ್ರೀ ಟಿ.ಶ್ಯಾಂ ಭಟ್*
ಈ ಎಲ್ಲಾ ಗಣ್ಯರ ಗಡಣದ ಗೌರವ ಉಪಸ್ಥಿತಿಯಲ್ಲಿ
🚩 *ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ* ಅವರ ಉತ್ಕೃಷ್ಟವಾದ ರಾಗ,ಲಯ ಭಾವಗಳಿಂದ ಕೂಡಿದ ಭಾಗವತಿಕೆ ಕಲೋಪಾಸಕರ ಹೃದಯವನ್ನೇ ದೋಚಿದ ಭಾಗವತಾಗ್ರೇಸರ
⭕ ಚಂಡೆ ಮದ್ದಳೆಗಳಲ್ಲಿ ಯುವ ಪ್ರತಿಭಾನ್ವಿತ ಕಲಾವಿದರಾದ *ಶ್ರೀಶ ರಾವ್ ನಿಡ್ಲೆ ಮತ್ತೆ ಅಕ್ಷಯ ರಾವ್ ವಿಟ್ಲ* ರಂಜಿಸಿದ ಜೋಡಿ.
💥ವಿದುರನ ಭಕ್ತಿಗೆ ಒಲಿದು ಹಾಲಿನ ಹೊಳೆಯನ್ನೇ ಹರಿಸಿದ, ಕೌರವನ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ರೀತಿಯಲ್ಲಿ ಉತ್ತರವನ್ನು ಕೊಟ್ಟು ನೆರೆದವರ ಹೃದಯದಲ್ಲಿ ಶಾಶ್ವತವಾಗಿ ಕಾಡಲಿರುವ *ವಿಶ್ವರೂಪವ ತೋರಿದ ವಿಶ್ವವಿರಾಟ್ ಪುರುಷ ಕೃಷ್ಣನಾಗಿ ವಾಗ್ದೇವಿಯ ವರ ಪುತ್ರ ,ಯಕ್ಷಾವ್ಯಯ ನಿಧಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು*
💥 ದೇವರಲ್ಲಿ ಬುದ್ಧಿಯನ್ನು ಹೇಗೆಪೂಜೆಯ ಮೂಲಕ ಸಮರ್ಪಿಸಿ ಒಕ್ಕುಡುತೆ ಹಾಲಿನನೈವೇದ್ಯವನ್ನು ಮಾಡಿ ಹಾಲಿನ ಹೊಳೆಯನ್ನೇ ಹರಿಸಲು ಕಾರಣನಾದ *ಭಕ್ತಾಗ್ರೇಸರ ವಿದುರನಾಗಿ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು*
🔥ನನ್ನದು ನನ್ನದು ನಿನ್ನದೂ ನನ್ನದೇ ಎಂಬ ಛಲದಂಕ ಚಕ್ರೇಶ್ವರ, ಮಾತಿಗೆ ಮಾತು, ಚರ್ಚೆಗೆ ಚರ್ಚೆ ,ರಂಜನೆಗೆ ರಂಜನೆ, ಭಾವಕ್ಕೆ ಭಾವ, ಭಕ್ತಿಗೆ ಭಕುತಿ, ಹಸ್ತಿನಾವತಿಯ ಮಕುಟಪ್ರಾಯವಾದ ಐದು ಗ್ರಾಮಗಳನ್ನು ಬಿಡು,ಸೂಜಿಮೊನೆ ಊರುವ ಜಾಗವನ್ನು ಕೂಡಾ ಪಾಂಡವರಿಗೆ ಸಾಮದಲ್ಲಿ ಬಿಡಲೊಲ್ಲೆ..ದೇವನಾದ ನಿನಗೆಸಂಧಾನವೇ ಆಗಬೇಕೆಂದರೆ ನೀನು ಹೇಳುವ ಈ ದುಷ್ಟ ಕೌರವನ ಹೃದಯದಲ್ಲಿ ಸಂಧಾನವನ್ನು ಮಾಡುವ ಭಾವವನ್ನು ನೀನೇಕೆ ಮಾಡದೆ ಒಂದರ್ಥದಲ್ಲಿ ಸಂಗ್ರಾಮವನ್ನೇ ಬಯಸುವ ನೀನು.. ನನ್ನ ಉಸಿರಿರುವ ತನಕ ಅಖಂಡ ಭಾರತವನ್ನು ವಿಂಗಡಣೆ ಮಾಡಲು ನಾನು ಒಪ್ಪಲಾರೆ..*ಈ ಕೃಷ್ಣ ಸಂದಾನಕ್ಕೆ ನಾನೇ ನ್ಯಾಯಾಧೀಶ ಎಂಬ ಛಲದಂಕ ಮಲ್ಲ ಅನಭಿಷಿಕ್ತ ಸಾಮ್ರಾಟ ಸುಯೋಧನನಾಗಿ ಸಭೆಯನ್ನು ಹಿಡಿದಿಟ್ಟು, ರಂಜಿಸಿ, ನ್ಯಾಯಮೂರ್ತಿಗಳಿಂದಲೂ ಭಳಿರೇ ಶಹಬಾಸು ಎನ್ನಿಸಿಕೊಂಡ ಮಾತಿನ ಮಲ್ಲ ಉಜಿರೆ ಅಶೋಕ ಭಟ್* ..
📍📍📍 *ತಾಳಮದ್ದಳೆ ಇತಿಹಾಸದಲ್ಲಿಯೇ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ತಾಳಮದ್ದಳೆ* ಅದುದಿಲ್ಲವೇನೋ...
ಇದು ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರಕ್ಕೆ ಸಂದ ಗೌರವ 💐💐💐
ಸಂಜೆ 5 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ 8:15 ಗಂಟೆಗೆ ಮುಕ್ತಾಯವಾಗುವ ವರೆಗೂ ಅತ್ಯದ್ಭುತ ಪ್ರತಿಕ್ರಿಯೆ... ಅಪೂರ್ವ ಜನಸಾಗರ... ನ್ಯಾಯಮೂರ್ತಿಗಳು, ಹಿರಿಕಿರಿಯ ವಕೀಲರುಗಳು, ಕಲಾಪೋಷಕರು ಕಲಾಭಿಮಾನಿಗಳಿಂದ ಕಿಕ್ಕಿರಿದ ಸಭಾಂಗಣ.... 💥🔥💥
*ಕಲೆಯ ವ್ಯಾಪ್ತಿಯ ವಿಸ್ತರಣೆಗೆ ಒಂದು ಹೊಸ ಭಾಷೆಯನ್ನು ಬರೆದ ಹಾಗಾಯಿತು..ಇದಕ್ಕೆ ಕಾರಣಕರ್ತರಾದ ಯಕ್ಷಾಭಿಮಾನಿ ವಕೀಲರು ಗಳಾದ ಶ್ರೀ ಸುಧಾಕರ್ ಪೈ ಹಾಗೂ ಶ್ರೀ ರಾಜೇಶ್ ರೈ (ತುರ್ತು ಕಾರ್ಯದ ನಿಮಿತ್ತವಾಗಿ ಗೈರು) ಅವರ ಕಾರ್ಯ ಶ್ಲಾಘನೀಯ ಹಾಗೂ ಅನುಸರಣೀಯ*
ಇವರಿಗೆ ಜೊತೆಯಾಗಿ ವಕೀಲರ ಸಂಘದ ಜನರಲ್ ಸೆಕ್ರೆಟರಿ ಗಳಾದ ಶ್ರೀ ಟಿ.ಜಿ ರವಿ, ಹಾಗೂ ಸಂಘದ ಇತರ ಪದಾಧಿಕಾರಿಗಳೂ ವಕೀಲರೂ ಆದ ಶ್ರೀ ಎಸ್.ರಾಜು,
ಶ್ರೀ ಎ.ಎಸ್.ಹರೀಶ್, ಶ್ರೀ ಹರೀಶ್ ಎಂ.ಟಿ ಹಾಗೂ ವಕೀಲರ ಸಂಘದ ಸದಸ್ಯರಿಗೂ ಕಲೋಪಾಸಕ ವಕೀಲರುಗಳಿಗೂ, ಒಳ್ಳೆಯ ಧ್ವನಿ ಬೆಳಕಿನ ವ್ಯವಸ್ಥೆ, ಬಹುಸಂಖ್ಯೆಯಲ್ಲಿ ನೆರೆದ ಕಾಲಾಭಿಮಾನಿ ಪ್ರೇಕ್ಷಕರಿಗೆ ಕುಳಿತಲ್ಲಿಗೆ ಯಥೋ ಸಾಧ್ಯ ಫಲಾಹಾರ (ಬಿಸ್ಕುಟ್ ಅಂಬಡೆ, ಕಾಶಿಹಲ್ವ,ಕಾಫೀ, ಚಹಾ) ವ್ಯವಸ್ಥೆ ಬಾಯಲ್ಲಿ ಇನ್ನೂ ನೀರೂರಿಸುಂತೆ ಮಾಡಿದ ಸರ್ವಾದಾರಣೀಯರಿಗೂ ಅನಂತ ಧನ್ಯವಾದಗಳು. ಮತ್ತು
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಬೆಂಗಳೂರಿನ ಕಲಾಭಿಮಾನಿಗಳೆಲ್ಲರಿಗೂ ಅಭಿನಂದನೆಗಳು👏 ಅಭಿವಂದನೆಗಳು..🙏
✍🏻ಗಣೇಶ್ ಭಟ್ ಬಾಯಾರು ಬೆಂಗಳೂರು
9448202079
🙏🙏🙏
Pmp😊0 p l
ತುಂಬಾ ಜ್ಞಾನವಂತರಾದ ಕಲಾವಿದರ ಸಂಗಮ... ಧನ್ಯೋಸ್ಮಿ...
ಸಂಕದಗುಂಡಿ ಯವರ ಅದ್ಭುತ ಅರ್ಥ, ಸುನ್ನಂಭಳ ರವರ ಅಪರಿಮಿತ ಜ್ಞಾನ, ಅಶೋಕ್ ಭಟ್ರ ಶೈಲಿ...
ಅದ್ಭುತ ತಾಳ ಮದ್ದಳೆ.. 👌🙏🙏🙏
ಅದ್ಭುತವಾದ ತಾಳಮದ್ದಳೆ ಕಾರ್ಯಕ್ರಮ ಧನ್ಯವಾದಗಳು 🙏🙏🙏
ಓಂ ನಮೋ ಶ್ರೀ ಮಂಜುನಾಥ 🙏 ವಾಕ್ ದಿಗ್ಗಜರಾದ ಶ್ರೀ ಅಶೋಕ್ ಭಟ್+ ವಿಶ್ವೇಶ್ವರ ಭಟ್+ ವಿದುರ ಅರ್ಥಧಾರಿ+ಸ್ವರಮಾಂತ್ರಿಕ ಸತೀಶ್ ಮತ್ತು ಹಿಮ್ಮೇಳ ಸಂಗಮದ ಅಮೋಮೋಮೋಘ ಕಾರ್ಯಕ್ರಮ!!!ಕುರಿಯ ವಿಠಲ ಶಾಸ್ತ್ರಿ (ನನ್ನ ಬಂಧು) ಸಂಘವು ರತ್ನ ದಂತೆ ಶೋಭಿಸಲಿ ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏 THAN Q "'DIGI.Y;"For presenting suuuuper VIDEO 👍 MAY GOD BLESS ALL OF YOU 🙏
" KRISHNA SANDAANA" is one of the best PRASANGA in YAKSHAGANA. The legendary Sheni Goplakrishna Bhat and Malpe Vasudeva Samaga have initially made this Prasanga so beautiful. Today with another legend Ujire Ashok Bhat as Kaurava and Vishshshra Bhat as Shrikrishna gave a higher level of excellence to this Prasanga . My sincere request is to make this high-quality Prasanaga in High-quality English and show in all Management schools IIIB IIMA and even in IAS Academy in Missouri .. This is real management lessons all managers should know. We the Dakshina Kannada people are blessed to hear these outstanding ARTHAGAARIKE .. NAMO NAMAHA
Malpe Ramadasa samaga
Sankadagundi sir, our favourite. Sunnambala sir super. Totaly, one of the best talamaddale.execelent.
ಇಂಥಹ ವಿದುರನ ಅರ್ಥ ಕೇಳುವ ಭಾಗ್ಯ ಇಂದು ಒದಗಿತು. ಶ್ರೀ ಸಂಕದಗುಂಡಿಯವರಿಗೆ ಕೋಟಿ ನಮನಗಳು. 💐 💐 💐 💐 💐 ಸ್ವಸ್ತಿ
Best of the Best Actors
Superb program. Thanks for uploading.
Super program
ಪದಗಳ ಜ್ಞಾನ ಭಂಡಾರ ತುಂಬಿ ತುಳುಕುತ್ತಿದೆ ❤
The best talamaddale. Talamaddale priya Ramesh Jois T A Sringeri.
Uttama mathugarike. 🌷👌🏼🌷
best prsentatn by sunnambals opening talk liked it crisp presise punching
Mr. Ashok Bhat & Mr.Vishweshwar Bhat Best oriator in yakashgana . Mr.Patalaji 👍👌💐
ಅತ್ಯಂತ ಮುದ ನೀಡಿದ ತಾಳಮದ್ದಳೆ. ಇಬ್ಬರೂ ಸವ್ಯ ಸಾಚಿಗಳು. ಪಟ್ಲರ ಹಿತಮಿತ ಗಾಯನ ಎಲ್ಲವೂ ಇಷ್ಟವಾಯಿತು.ಯಕ್ಷ ಗಾನಮ್ ಗೆಲ್ಗೆ
🙏
2:15:55🎶🎤🎵🎧💐
ಯಕ್ಷಗಾನೇತರ ವಿಕ್ಷಕರು ಹೆಚ್ಚು ಇರುವ ಸಭೆಗಳಲ್ಲಿ ಇಂತಹ quality ಪ್ರೊಗ್ರಾಮ್ ನೀಡಿದರೆ ಮಾತ್ರ, ಯಕ್ಷಗಾನದ ವ್ಯಾಪ್ತಿ ವಿಸ್ತಾರಸಾದ್ಯ.ಅದ್ಬುತ ಕೆಲಸ ಉಜಿರೆಯವರಿಂದ
Good Arguments thank you
🙏🙏
Nice one,,😍😍😍
Great arthdari sunnabambala
ವಿದ್ವಾನ್ ಸಂಕದಾಗುಂಡಿ ವಿದುರ ಪಾತ್ರ ವಿನಿಮಯ ಸೂಪರ್
Overal good thank you
ಸೂಪರ್ ವಾಗ್ಯುದ್ಧ 👌👌👌
👌🔥
👍👍🙏🙏
super voice
👌👌👌
ಒಂದೇ ಶಬ್ದ ದಲ್ಲಿ ಹೇಳಬೇ ಕೆಂದರೆ ಅದ್ಭುತ ವಾಗ್ವೈಖರಿ. ಇಬ್ಬರೂ ಸಮರ್ಥರು. ಖುಷಿ ಕೊಡುವವರು. ಚಂದದ ತಾಳಮದ್ದಲೆ. ಎಲ್ಲರಿಗೂ ಅಭಿನಂದನೆಗಳು. 💐 💐 💐 💐 💐 ಸ್ವಸ್ತಿ..
ಹೊಗಳಲು ನನ್ನಲ್ಲಿ ಪದಗಳಿಲ್ಲ. ಸದ್ಯ ಇಂತಹ ತಾಳಮದ್ದಲೆ ಕೇಳಲಿಲ್ಲ. ನಮೋ ನಮಃ.
👌🙏
Yakshagana kalasagara
1:43:20🎶🎤🎵🎧💐
32:40🎶🎤🎵🎧💐 ಪಟ್ಲ
ಹೈ ಕೋರ್ಟ್ ಮೇಲೆ ದರ್ಮ ಓಲೈಕೆ ಕೆಸ್ ಹಾಕದಿದ್ದರೆ ಸಾಕು
ಉತಮತಾಳಮದಳಪಟಲರಹಾಡುಕೃಷಣನಕಿರೀಟಕೆಹೊಸಗರಿಸೇರಿದಂತಿತು
ಸುಣಂಬಳಮಾತಲಮುತುಅಶೋಕಭಟರವಾಕ್ಸಮರವಿಭಿನತೆಇದರೂಚನಾಗಿತುಧನಯವಾದಗಳು
ಅತ್ತ್ಯುತ್ತಮ ಪ್ರದರ್ಶನ 👌👌👌👏👏👏👍
Uttama mattada Talamaddale!
ಉತ್ತಮ ತಾಳಮದ್ದಳೆ. ವಿಡಿಯೋ ಚಿತ್ರೀಕರಣ ಅಷ್ಟು ಚೆನ್ನಾಗಿ ಬಂದಿಲ್ಲ. ಕೆಮರಾ ಸುಮ್ಮನೆ ಸುಮ್ಮನೆ ಆಚೆ ಈಚೆ ಫೋಕಸ್ ಆಗಿದೆ.
ಇದು ಫೋನ್ ಮೂಲಕ ಚಿತ್ರೀಕರಣ ಮಾಡಿದ್ದು. ಮತ್ತು ಜಾಗದ ಸಮಸ್ಯೆಯಿದ್ದ ಕಾರಣ, ಆಚೀಚೆ ಓಡಾಡುವವರ ಮೇಲಿನ ಫೋಕಸ್ ತಪ್ಪಿಸಲು ಕೊಂಚ ಕ್ಯಾಮೆರಾವನ್ನು ಕೆಲವೆಡೆ ಪ್ಯಾನ್ ಮಾಡಲಾಗಿತ್ತು. ಕ್ಷಮೆ ಇರಲಿ.
ಸುಂದರ ಭಟ್ ಅವರೇ ನಮಸ್ಕಾರ 😍🙏.
ನಾನು ಈ ತಾಳಮದ್ದಲೆಗೆ ಹೋಗಿದ್ದೆ,
ಬೆಂಗಳೂರಿನ ಹೈಕೋರ್ಟ್ ನ ಸಭಾಂಗಣದಲ್ಲಿ ನಡೆದಿತ್ತು. ಮೊದಲ ಸಾಲಿನಲ್ಲಿ 4 ಜನ ನ್ಯಾಯಾಧೀಶರಿದ್ದರು , ಅದರ ಮದ್ಯೆ ಸಭಿಕರಿಗೆ ಉಪಹಾರದ ವ್ಯವಸ್ಥೆ ನಡೆಯುತ್ತಿತ್ತು.
ಮುಂದೆ ಹೋಗಿ ವಿಡಿಯೋ ಮಾಡುವಷ್ಟು ಸ್ಥಳಾವಕಾಶ ಕೂಡ ಇರಲಿಲ್ಲ.ಇಷ್ಟಾದ್ರೂ ವಿಡಿಯೋ ಸಿಕ್ಕಿದ್ದು ನಮ್ಮ ಪುಣ್ಯ.ಮೊಬೈಲ್ಗೆ Tripod fix ಮಾಡಿ ವಿಡಿಯೋ ಮಾಡುತ್ತಿದ್ದ ಕಷ್ಟ ಹಿಂದೆ ಕುಳಿತ ನಮಗೆ ಕಾಣಿಸುತ್ತಿತ್ತು .
ಅದಕ್ಕಾಗಿ ಮನಸ್ವಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಅವಿನಾಶನ್ನ😍🙏🙏.
@@iavinasha ಅವಿನಾಶ್ ಅವರ ಚಿತ್ರೀಕರಣದಿಂದ ನಮಗೆಲ್ಲ ಈ ಅಥ್ಬುತವಾದ ತಾಳಮದ್ದಳೆ ನೋಡುವ ಸೌಭಾಗ್ಯ ಪ್ರಾಪ್ತವಾಯಿತು. ಅವಿನಾಶ್ ಅವರ ಕಾರ್ಯ ಬಹಳ ಪ್ರಶಂಸನೀಯ. ಧನ್ಯವಾದಗಳು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಟಾನದ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು.
@@rajatha58 ಥ್ಯಾಂಕ್ಯೂ ರಜತ್ ಅವರೇ. 🙏
Best performance, but ugly videography, thoo wanderers, front side audiance obstacles