ಹೇಗಿತ್ತು ಗೊತ್ತಾ ಕರ್ಣನ ಅಂತಿಮ ಕ್ಷಣ..? Story of karna. Mahabharata part- 62
HTML-код
- Опубликовано: 10 дек 2019
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ನಮಸ್ಕಾರ ರಾಘವೇಂದ್ರ ಸರ್ ಕರ್ಣನ ವಿಚಾರದಲ್ಲಿ ನೀವು ಕೃಷ್ಣರಾದರಲ್ಲ ಸರಿಯೇ!?
1. ಬ್ರಾಹ್ಮಣ ಶಾಪ ಕೊಟ್ಟ ನಿಜ ಆದರೆ ಭೂಮಿಯಲ್ಲಿ ರಥ ಚಕ್ರ ಸಿಲುಕಿಹೋಗಲಿ ಅಂತ ಅಲ್ಲ ," ಹೇಗೆ ನನ್ನ ಕರು ಅಸಹಾಯಕ ಸ್ಥಿತಿಯಲ್ಲಿರುವಾಗ ನೀನು ಕೊಂದೆಯೋ ಹಾಗೆಯೇ ಒಂದು ದಿನ ಬರುತ್ತದೆ ಅಸಹಾಯಕನಾಗಿರುತ್ತೀಯಾ ಆಗ ನಿನ್ನನ್ನು ಕೋಲ್ಲಲಾಗುತ್ತದೆ" ಎಂದು ಶಾಪ ಕೊಟ್ಟ. ಅಸಾಹಯಕ ಸ್ಥಿತಿ ಎಂದರೆ ಕರು ಕೆಸರಿನಲ್ಲಿ ಬಿದ್ದು ಅದು ಮೇಲೆ ಏದು ನಿಲ್ಲುವ ಪ್ರಯತ್ನ ಪಡುವ ಸಂದರ್ಭ ಬರುತ್ತದೆ..
ಆ ಶಾಪ ಅದೇ ರೀತಿ ಭೂಮಿಯಲ್ಲಿ ಸಿಲುಕಿದ ರಥದ ಚಕ್ರ ಎತ್ತಲು ಪ್ರಯತ್ನ ಮಾಡಿವ ಸಂದರ್ಭದಲ್ಲಿ ಅರ್ಜುನ ಬಾಣ ಕರ್ಣನ ಪ್ರಾಣ ತೆಗೆಯುತ್ತದೆ,
ಭೂಮಿಯಲ್ಲಿ ರಥ ಚಕ್ರ ಸಿಲುಕುವ ಕಾರಣ ಭೂದೇವಿಯ ಶಾಪ ಒಂದು ಪುಟ್ಟ ಮಗುವಿನ ಕೈಯಿಂದ ಭೂಮಿಗೆ ಬಿದ್ದ ತುಪ್ಪವನ್ನು ಕರ್ಣ ಆ ಮಗುವಿಗೆ ಅದೇ ತುಪ್ಪ ಬೇಕು ಎಂಬ ಕಾರಣಕ್ಕೆ ಬಿದ್ದ ತುಪ್ಪವನ್ನು ಅಮೋಘ ಅಸ್ತ್ರ ದಿಂದ ಭೂಮಿಯಿಂದ ತುಪ್ಪವನ್ನು ಸೇಳೆಯುತಾನೇ ಅದಕ್ಕೆ ಕೋಪಗೊಂಡ ಭೂದೇವಿ ನಿನ್ನ ಅಂತ್ಯದಲ್ಲಿ ನಾನು ಕೂಡ ನಿನ್ನ ಕೈ ಬಿಡುತೇನೆ ಎಂದು ಶಾಪ ನೀಡುತ್ತಾಳೆ. ಇಲ್ಲಿ ಒಂದು ವಿಚಾರದಲ್ಲಿ ತಪ್ಪು ಕರ್ಣನದ್ದು ಏನು ಎಂದು ಆಲೋಚನೆ ಮಾಡಿದರೆ ಒಂದು ಮಗುವಿಗೆ ಸಹಾಯ ಮಾಡಿದ್ದು ಅದಕ್ಕೆ ಏಕೆ ಭೂದೇವಿ ಶಾಪ ಕೊಡಬೇಕು ಎಂದು ಪ್ರಶ್ನೆ ಬರುತ್ತದೆ ಆದರೆ ಮೂಲದಿಂದ ಕರ್ಣ ಉಪಯೋಗಿಸಿದ ಅಸ್ತ್ರ ಸಾಮಾನ್ಯದಲ್ಲ ಅದರ ಶಕ್ತಿಯಿಂದ ಭೂದೇವಿಯು ಕೂಡ ನಿಶಕ್ತಿಯಾಗಿ ಆ ತುಪ್ಪವನ್ನು ಬಿಟ್ಟಿತ್ತು ಎಂದು ವರ್ಣನೆ ಇದೆ. ಅದೆ ಕಾರಣಕ್ಕೆ ನಾನು ಕೂಡ ನೀನು ನಿಂತ ನೆಲದಲ್ಲಿ ನಿಶಕ್ತಿಯಾಗುವೇ ಎಂದು ಶಾಪಕೊಟ್ಟಲು ಎಂದು ಬರುತ್ತದೆ . ಇದರ ಬಗ್ಗೆ ನೀವು ಹೇಳಿಲ್ಲ.
2. ಕೃಷ್ಣ ಹೇಳಿದ ಅಧರ್ಮದ ಸಾಲುಗಳು
ಕರ್ಣ ಮಾಡಿದ ಅಧರ್ಮನ್ನು ಕರ್ಣನಿಗೆ ತಿಳಿಸುವುದಗಿಂತ ಹೆಚ್ಚಾಗಿ ಆ ಸಮಯದಲ್ಲಿ ಅರ್ಜುನನ್ನು ಬಾಣ ಊಡುವಂತೆ ಮಾಡುವುದು ಕೃಷ್ಣನ ಕೆಲಸವಾಗಿತ್ತು ಅಷ್ಟೇ ಅದಕ್ಕೆ ಅಭಿಮನ್ಯುವಿನ ವಿಚಾರದ ಪ್ರಸ್ತಾಪ ಮಾಡುತ್ತಾನೆ ಕೌರವರ ಪಕ್ಷ ಮಾಡಿದು ಧರ್ಮವೇ ಎಂದು ಹೇಳಿ ಅರ್ಜುನ ಧನಸ್ಸು ಎತ್ತುವಂತೆ ಮಾಡುತ್ತಾನೆ ಹೊರತು ಕರ್ಣ ಅಧರ್ಮಿ ಎಂದು ಎಲ್ಲೂ ಪ್ರಸ್ತಾಪ ಮಾಡುವುದಿಲ್ಲ, ಮತ್ತೆ ದ್ರೌಪದಿಯ ವಿಚಾರದಲ್ಲಿ ಪರಶುರಾಮರ ಮೂರು ಶಿಷ್ಯರು ಮೌನವಾಗಿ ಇದ್ದು ಬಿಡುತ್ತಾರೆ ಆ ಮೌನ ಅಧರ್ಮ ಎಂದು ಕೃಷ್ಣ ಹೇಳುತ್ತಾನೆ, ಅನ್ಯಾಯ ಎಂದು ತಿಳಿದರು ಅದನ್ನು ತಡೆಯಲಿಲ್ಲ ಅದು ಅಧರ್ಮ ನೀನು ಅದೇ ಸಭೆಯಲ್ಲಿ ಆ ಅಧರ್ಮಕ್ಕೆ ಸಾತು ಕೊಟ್ಟಿದ್ದು ನಿನ್ನ ಅಧರ್ಮ ಕರ್ಣ ಎಂದು ಹೇಳುತ್ತಾನೇ ..
ಗುರುಗಳ ಮುಂದೆ ನಿಂತು ಕರ್ಣ ಸುಳ್ಳು ಹೇಳಿಲ್ಲ , ಆದರೆ ಸತ್ಯ ಮುಚ್ಚಿಟ್ಟ ಅಷ್ಟೇ ಅದು ಅಧರ್ಮವಾದರೆ ಕೃಷ್ಣ ,ಕುಂತಿ, ಪಾಂಡವರು ಅಧರ್ಮಿಗಳೇ ಕೃಷ್ಣ , ಕುಂತಿಗೆ ಕರ್ಣ ಯಾರು ಎಂದು ತಿಳಿದರು ಸಹ ಕೊನೆಯ ತನಕ ಮುಚ್ಚಿದು ತಪ್ಪು, ಪಾಂಡವರ ಅಗ್ಙತವಾಸ ಮಾಡುವಾಗ ತಾವು ಯಾರು ಎಂಬುದನ್ನು ವಿರಾಟರಾಜನಿಂದ ಮುಚ್ಚಿದು ತಪ್ಪು ಅಲ್ಲವೇ!?
3. ಇನ್ನೂ ಕೀಳರಿಮೆಯಲ್ಲಿ ಇದ್ದ ಕರ್ಣ , ಅವನು ಅವರ ಸೂತರಿಗು ಏನು ಮಾಡಲಿಲ್ಲ ಎಂದರೇ ಕರ್ಣ ಆಗದರೆ ಏಕೆ ಜರಸಂಧನ ಜೊತೆ 21 ದಿನಗಳು ಯುದ್ಧ ಮಾಡಿ ಗೆದ್ದ!? ಅವನಿಗಾಗಿ ಅಲ್ಲ ಪ್ರಜೆಗಳಿಗಾಗಿ .
ಮತ್ತೆ ಹಸ್ತಿನಾಪುರಕ್ಕೆ ಬಂದ ಕರ್ಣ ಅಲ್ಲಿಯೇ ಯುದ್ಧ ಘೋಷಣೆ ಮಾಡಿ ರಾಜ್ಯ ಗೆದ್ದಿದ್ದರೆ ಕ್ಷತ್ರಿಯನಾಗುತ್ತಿದ್ದ ಎಂದರೆ ಅವನ ಪರಾಕ್ರಮ ವಿಮರ್ಶೆ ಮಾಡುವ ಸಂಕೇತ ಅಷ್ಟೇ, ಅಲ್ಲಿ ನಡೆದ ಪ್ರಸಂಗ ಕರ್ಣನಲ್ಲಿ ಕೀಲು ಭಾವ ಎಂದು ಹುಟ್ಟು ಹಾಕಿಲ್ಲ ಬದಲಿಗೆ ಕರ್ಣನ ಮೇಲೆ ಹಸ್ತಿನಾಪುರದ ಜನ ರಾಜ್ಯದ ಮುಖ್ಯ ಪಾತ್ರಗಳು ಕೀಲಾಗಿ ಕಂಡಿತ್ತು. ಅದಕ್ಕೆ ಎಲ್ಲಾ ರಣರಂಗದಲ್ಲಿ ಇದ್ದ ಜನ ಹೊರೆಟು ಹೋಗು ಸೂತ ಪುತ್ರ ಎಂದು ಕೂಗುತ್ತಿದ್ದದು ಅಲ್ಲವೇ ? ಕರ್ಣ ಒಂದು ವೇಳೆ ಕೀಲು ಮನೋಭಾವ ಇಟ್ಟುಕೊಂಡಿದ್ದರೆ ನಾನು ಸೂತ ಎಂದು ದ್ರೌಪದಿಯ ಸ್ವಯಂವರಕ್ಕೆ ಹೋಗುತ್ತಿರಲಿಲ್ಲ.. ಆದರೆ ಅವನಲ್ಲಿ ನಾನು ಒಬ್ಬ ಯೋಧ ಎಂದು ಮಾತ್ರ ಅವನ ಮನಸ್ಸಿನಲ್ಲಿ ಇತ್ತು ಅಷ್ಟೇ . ಇನ್ನೂ ಅವನಲ್ಲಿ ಕೀಲು ಭಾವ ಇದ್ದಿದ್ದರೆ ಬ್ರಾಹ್ಮಣರಿಗೆ , ದೇಹಿ ಎನ್ನುವವರಿಗೆ ದಾನ ಮಾಡುತ್ತಿರಲ್ಲಿಲ್ಲ. ಅಲ್ಲವೇ, ಕರ್ಣ ತನ್ನ ಸಮುದಾಯವನ್ನು ಹೇಗೆ ಕಾಪಾಡುಕೊಂಡ ಎಂದು ಅವರ ಚಿಕ್ಕ ವಯಸ್ಸಿನ ಘಟನೆಗಳು ತುಂಬಾ ಇದೆ, ಕೀಲು ಭಾವವನ್ನು ಕರ್ಣನ ಮನಸ್ಸಿನಲ್ಲಿ ಎಂದು ಬಂದಿಲ್ಲ. ಏಕೆಂದರೆ ಅಂತಹ ಅವಕಾಶಗಳೇ ಇಲ್ಲ ಯೋಚಿಸಲು,
ಒಂದು ವೇಳೆ ಕರ್ಣ ಹಸ್ತಿನಾಪುರದ ಮೇಲೆ ಯುದ್ಧ ಸಾರಿದ್ದರೆ ಅಲ್ಲಿ ಒಟ್ಟು ಮೂರು ಯೋಧರನ್ನು ಸೋಲಿಸಬೇಕಿತ್ತು , ಭೀಷ್ಮ ಪಿತಾಮಹ ಸೇನಾನಿ ದಂಡನಾಯಕ ಅವರನ್ನು ಅಂದು ಹೆಸರಿಸಿದರೆ ಸಾಕು ಅಕ್ಕ ಪಕ್ಕದ ರಾಜ್ಯಗಳೇ ಭಯ ಪಡುವ ಹೆಸರು ಭೀಷ್ಮ , ಮತ್ತೆ ದ್ರೋಣ, ವಿದುರ, ಕೃಪಚಾರ್ಯರು, ಜೊತೆಗೆ ಪಾಂಡವರು, ಕೌರವರು ಕೂಡ ಯುದ್ದ ಮಾಡುತ್ತಿದ್ದರು..
ಆ ಸಂದರ್ಭದಲ್ಲಿ ಅವಕಾಶ ಬೇಕಾಗಿತ್ತು ಅಷ್ಟೇ, ಕ್ಷತ್ರಿಯನಂತೆ ಕಾಣುವ ಉದ್ದೇಶವಲ್ಲ , ಆ ಅವಕಾಶ ಸಿಕ್ಕಿತು ದುರ್ಯೋಧನನಿಂದ ಆದರೆ ನಿಮಗೆ ತಿಳಿದಿರಲಿ ಸರ್ ಧರ್ಮಜನಿಗಿಂತ ಪ್ರಜೆಗಳನ್ನು ನೋಡಿಕೊಳ್ಳುವುದರಲ್ಲಿ ದುರ್ಯೋಧನನನೇ ಮೊದಲಿಗ . ಅವನ ಸ್ನೇಹಕ್ಕೆ ಸೋತಿದ್ದ ಕರ್ಣ ಹೇಗೆ ಕೃಷ್ಣ ಅರ್ಜುನನಿಗೆಯೊ ಹಾಗೆಯೇ ಕರ್ಣ ದುರ್ಯೋಧನನಿಗೆ ಅಷ್ಟೇ ಖಂಡಿತ ಇದ್ದರ ಸಾಲು ನಾನು ಒಪ್ಪುವುದಿಲ್ಲ ಸರ್ ಕ್ಷಮಿಸಿ
Dhanraj Karna. ಪ್ರೀತಿಯ ನಮಸ್ಕಾರಗಳು. ಕರ್ಣನ ಪಾತ್ರವನ್ನ ನಾನು ನೋಡ್ತಿರೋದ್ರಲ್ಲೂ ನೀವು ನೋಡ್ತಿರೋದ್ರಲ್ಲೂ ದೃಷ್ಟಿ ಕೋನದಲ್ಲಿ ವ್ಯತ್ಯಾಸ ಇದೆ. ನಾನು ಸೈಕಲಾಜಿಕಲ್ಲಾಗಿ ಕರ್ಣನ ಪಾತ್ರವನ್ನ ನೋಡ್ತೀನಿ. ನೀವು ಅಭಿಮಾನದಿಂದಾ ನೋಡ್ತೀರ.
ಮಹಾಭಾರತದಲ್ಲಿ ಒಬ್ಬೊಬ್ಬ ಕವಿ ಒಂದೊಮದು ರೀತಿಯಲ್ಲಿ ಒಂದೊಂದು ಪಾತ್ರವನ್ನ ವೈಭವೀಕರಿಸ್ತಾ ಹೋಗ್ತಾನೆ. ಆದ್ರೆ ನನ್ನ ದೃಷ್ಟಿಯಲ್ಲಿ ಅಲ್ಲಿ ಎಲ್ಲ ಪಾತ್ರಗಳೂ ದೊಡ್ಡವೇ. ವೈಭವದ ಪಾತ್ರಗಳೇ. ಅದೇ ಮಹಾಭಾರತದ ಸೌಂದರ್ಯ.
ಇನ್ನು ಶಾಪಗಳ ವಿಷಯಕ್ಕೆ ಬಂದ್ರೆ ಭೂತಾಯಿಯ ಶಾಪ ಅನ್ನೋದ್ರಲ್ಲಿ ನನಗೆ ಲಾಜಿಕ್ ಕಾಣೊದಿಲ್ಲ. ಕವಿ ಸಮಯ ಕಾಣತ್ತೆ. ಭೂಮಾತೆ ಅವಳುತಾಯಿ . ಶಾಪ ಕೊಡೋದಿಲ್ಲ.. ಮತ್ತು ಮಗುವಿನ ವಿಷಯದಲ್ಲಿ ಶಾಪ ಕೊಟ್ಟಳು ಅನ್ನೋದೇ ಲಾಜಿಕ್ ಇಲ್ಲದ ಕತೆಯಾಗಿ ನನಗೆ ಅನ್ನಿಸುತ್ತೆ ಹಾಗಾಗಿ ನಾನು ಅದನ್ನ ಪ್ರಸ್ತಾಪಿಸಿಲ್ಲ.
ಸೂತರಿಗಾಗಿ ಕರ್ಣ ಏನೂ ಮಾಡಲಿಲ್ಲ ಅನ್ನೋದು. ಅವನು ಜರಾಸಂಧನ ಜೊತೆ ಯುದ್ಧ ಮಾಡಿದ್ದಕ್ಕೂ ಸೂತರ ಉದ್ಧಾರಕ್ಕೂ ಏನು ಸಂಬಂಧ..? ಯಾದವರ ಕೃಷ್ಣ ತನ್ನ ಸಮುದಾಯಕ್ಕೆ ಒಮದು ಗೌರವ ತಂದು ಕೊಡ್ತಾನೆ. ಯಾದವ ಅನ್ನೋದು ಗೋಪಾಲಕ ಅನ್ನೋದು ಕೃಷ್ಣನಲ್ಲಿ ಕೀಳರಿಮೆಯನ್ನ ಉಂಟು ಮಾಡಲಿಲ್ಲ. ಆದ್ರೆ, ಸೂತ ಪುತ್ರ ಅನ್ನೋದನ್ನೇ ಕರ್ಣ ಸ್ವೀಕರಿಸೋದಕ್ಕೆ ಕರ್ಣ ಸಿದ್ಧನಿರಲಿಲ್ಲ. ಅಂಗರಾಜ ನಾಗಿದ್ದ, ಸಾಮ್ರಾಟನ ಅತ್ಯಂತ ಪ್ರಥಿಯ ಸ್ನೇಹಿತನಾಗಿದ್ದ ಕರ್ಣನಿಗೆ ಏನೆಲ್ಲಾ ಮಾಡೋದಕ್ಕೆ ಸಾಧ್ಯ ಇತ್ತು..? ಆದ್ರೆ ಅವನು ಅಂಥಾ ಯಾವ ಪ್ರಯತ್ನವನ್ನಾದ್ರೂ ಮಾಡಿದ್ದು ಮಹಾಭಾರತದ ಯಾವ ಲೇಖಕನ ಗ್ರಂಥದಲ್ಲಾದ್ರೂ ಉಲ್ಲೇಖ ಇದೆಯಾ..?
ಇನ್ನು ಅಂಗರಾಜನಾದ ನಂತರ ಅವನು ಅಂಗದೇಶವನ್ನ ಪಾಲಿಸಿದ ಬಗ್ಗೆ ಕೂಡಾ ಯಾವ ಉಲ್ಲೇಖವೂ ಇಲ್ಲ.. ಹಾಗಾದ್ರೆ ಕ್ಷಾತ್ರ ಧರ್ಮ ನಿಭಾಯಿಸಿದ ಹಾಗಾಯ್ತಾ..?
ಕರ್ಣನನ್ನ ಸಮಾಜ ಕೀಳಾಗಿ ಕಂಡಿತ್ತು ಅನ್ನೋದು. ಕೆಳವರ್ಗದಲ್ಲಿದ್ದಾಗ ಅದು ಆರ್ಥಿಕ ಸಾಮಾಜಿಕ ಯಾವುದೇ ಇರಬಹುದು. ಆ ವರ್ಗದವರೂ ಕೂಡಾ ಕೀಳಾಗೇ ಕಾಣ್ತಾರೆ ಕಾಲೆಳೀತಾರೆ.. ಅದನ್ನೆಲ್ಲಾ ದಾಟಿ ಬೃಹತ್ ಶಕ್ತಿ ಯಾಗಿ ಬೆಳೆಯುವ ಅವಕಾಶಗಳು ಕರ್ಣನಿಗೂ ಬಂದಿದ್ವು. ಆದ್ರೆ ಅವನು ಗುರಿ ಸೇರೋದಕ್ಕೆ ಆಯ್ಕೆ ಮಾಡಿಕೊಂಡ ದಾರಿ ಸರಿ ಇರಲಿಲ್ಲ..
ದುರ್ಯೋಧನ ಪ್ರಜಾಪಾಲನೆಯಲ್ಲಿ ಧರ್ಮನಿಗಿಂತಾ ಮೇಲಾ ಕೀಳಾ ಅದನ್ನ ಹೇಳೋದಕ್ಕೆ ಅಲ್ಲಿ ಸಂದರ್ಭವೇ ಬರಲಿಲ್ಲ. ಕರ್ಣ ರುಣ ಭಾರದಲ್ಲಿ ಮುಳುಗಿ ಸ್ನೇಹಿತನ ಎಲ್ಲ ಕೃತ್ಯಗಳಿಗೂ ಸಾಹೋ ಸಾಹೋ ಅಂತಾ ಹೇಳದೇ ತಪ್ಪುಗಳನ್ನ ತಿದ್ದುವ ಪ್ರಯತ್ನ ಮಾಡಲಿಲ್ಲ ಅನ್ನೋದನ್ನ ಕೂಡಾ ನಾನು ಮಾನಸಿಕವಾಗಿ ಕರ್ಣನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳೋದಕ್ಕೆ ಮತ್ತು ಮಾಡಿಸೋದಕ್ಕೆ ಪ್ರಯತ್ನ ಮಾಡಿದೀನಿ.
ಇಲ್ಲಿ ಕರ್ಣ ಒಳ್ಳೆಯವನಾ ಕೆಟ್ಟವನಾ..? ಧರ್ಮಿನಾ.. ಅಧರ್ಮೀನಾ..? ಪ್ರಶ್ನೆ ಅದಲ್ಲಾ.. ಕೆಳವರ್ಗದಿಂದಾ ಬಂದ ಪ್ರತಿಭಾವಂತನೊಬ್ಬ ದಾರಿ ತಪ್ಪಿದ್ರೆ. ಬೇರೆ ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾದ್ರೆ, ಬಲಿಷ್ಠರ ಆಶ್ರಯಗಳಲ್ಲಿ ರುಣದ ಭಾರಕ್ಕೆ ಬಿದ್ರೆ ಅವನ ಸ್ಥಿತಿ ಏನಾಗಬಹುದು, ಅವನ ಒಳ್ಳೇನ ಸಾಮರ್ಥ್ಯ ಗುಣಗಳು ಹೇಗೆ ದುರ್ಬಳಕೆಯಾಗಬಹುದು ಅನ್ನೋ ದೃಷ್ಟಿಯಲ್ಲಷ್ಟೇ ಕರ್ಣನನ್ನ ನಾನು ನೋಡ್ತೀನಿ.
ಪಾತ್ರಗಳು ನನ್ನನ್ನ ಕಾಡತ್ವೆ ನಿಜಾ.. ಆದ್ರೆ ಪಾತ್ರಗಳನ್ನ ಸೃಷ್ಟಿಸಿದ ವ್ಯಾಸರ ಬಗ್ಗೆ ಅಭಿಮಾನ ಬೆಳೆಯತ್ತೇ ಹೊರತು ನಾನು ನಾನಾಗಿ ಯಾವ ಪಾತ್ರವನ್ನೂ ಅಭಿಮಾನದಿಂದಾ ನೋಡೋದಿಲ್ಲ.. ಹಾಗೆ ನೋಡಿದ್ರೆ ಆ ಪಾತ್ರಗಳ ಸರಿ ತಪ್ಪುಗಳನ್ನ ಅರ್ಥ ಮಾಡಿಕೊಳ್ಳೋದು ಕಷ್ಟವಾಗತ್ತೆ.
ನನ್ನ ಪ್ರತಿ ಕ್ರಿಯೆ ನಿಮ್ಮ ಮನಸಿಗೆ ಕಷ್ಟ ಕೊಡದಿರಲಿ.
ಅಭಿಮಾನದ ಹೊರತಾಗಿ ಎಲ್ಲ ಪಾತ್ರಗಳನ್ನೂ ನೋಡುವ ಪ್ರಯತ್ನವನ್ನ ಒಮ್ಮೆ ಶುರು ಮಾಡಿ ಅದು ನಮಗೆ ಬದುಕಿನ ಸಾಲು ಸಾಲು ಪಾಠಗಳನ್ನ ಹೇಳಿಕೊಡುತ್ತಾ ಹೋಗತ್ತೆ.
ಪ್ರೀತಿಯಿಂದಾ...
ನಿಜವಾದ ಮಾತು ಇದು
I like this two comments
Good question.
Nice reply..
#Superb
Super
Nevu ondu vedio madi torsi
ಕರ್ಣ ಸತ್ತ,ಕರ್ಣ ಸತ್ತ, ಕರ್ಣ ಸತ್ತ, ಮಹಾಭಾರತದಲ್ಲಿ ಮಹಾವೀರ ಕರ್ಣನ ಪಾತ್ರ ಮುಗೀತು ಇನ್ಮೇಲೆ ಮಹಾಭಾರತವನ್ನ ಕೇಳೋದೆ ಬೇಸರ ಅನ್ನಿಸ್ತಿದೆ. ಕರ್ಣನ ವಿದಾಯದಿಂದ ಮನಸ್ಸು ಭಾರವಾಗಿದೆ.
ಕರ್ಣನ ಪಾತ್ರ, ವ್ಯಕ್ತಿತ್ವದ ವಿಮರ್ಶೆ ಅದ್ಭುತವಾಗಿದೆ
ಕರ್ಣ ನನ್ನ ಕರ್ಣ ಓ ಕರ್ಣ ಎಲ್ಲಾ ಇದು ಏನು ಇಲದ ಹಾಗೆ ಬದುಕು ನಡೆಶಿದ ಕರ್ಣ ನೀನೇ ನನ್ನ ಕರ್ಣ
ಕಣ೯ ಕಣ೯ಆಹಾ, ಆ ಹೆಸರು ಕೇಳಿದರೆ ಮೈ ನವಿರೇಳುವ ಪಾತ್ರ. ಪಾಪ ಎಂಥ ದುರಾದೃಷ್ಟವಂತ .ಎಲ್ಲರಿಂದಲೂ ಅವಮಾನ, ಮೋಸ, ಶಾಪ,ನೋವು 😭😭😭
ಈ ಕಾಥಾಮೃಥಾ ನೀವು ಹೇಳುವ ಪರಿಯೇ ಚೆಂದ .... ನಿಮ್ಮ ಮಾತು ಮತ್ತು ತಲ್ಲೀನತೆಗೆ ನನ್ನ ಧನ್ಯವಾದಗಳು ರಾಘವೇಂದ್ರ ಸರ್ ☺
ಇವತ್ತಿನ ನಿಮ್ಮ ವಿವರಣೆ ಜೀವನ ರೂಪಿಸಿಕೊಳ್ಳಬೆಕಾದ ನಮ್ಮಂತಹ ಯುವಕರಿಗೆ ಅತ್ಯಮೂಲ್ಯ ಧನ್ಯವಾದಗಳು.
ಪಾತ್ರ ವರ್ಣನೆ,. ಪರಿಶೀಲನೆ.. ವಿಶ್ಲೇಷಣೆ. ಅದ್ಭುತ ವಾಗಿ ಮಾಡಿದ್ದೀರ.
ಗೋಹತ್ಯೆ ಮಹಾಪಾಪ...ಅದು ಎಲ್ಲರಿಗೂ ಅನ್ವಯಿಸುತ್ತೆ..ಕರ್ಣ.😢
Thanks ಅಭಿನಂದನೆಗಳು ಸರ್ ಥ್ಯಾಂಕ್ಯು ಹೀಗೆ ರಾಮಾಯಣ ತಮ್ಮ ಬಾಯಿಂದ ಉದ್ಭವ ವಾಗಲಿ ಕಾಯುತ್ತಿರುತ್ತೇವೆ
ಅಣ್ಣಾ....ನಮಸ್ತೆ...🙏🙏
ಕರ್ಣ ಮನಸ್ಸಿನೊಳಗಿಳಿದ
ಕರ್ಣನಿಲ್ಲದ ಮಹಾಭಾರತ ಅಪೂರ್ಣ
ನಿಜಕ್ಕೂ ಒಂದೂಒಳ್ಳೇ ಅದ್ಭುತ ಅನುಭವ ನೀಡುತ್ತದೆ ನನ್ನ ಹುಲಿ ಕರ್ಣನ ಜೀವನ ಚರಿತ್ರೆ ಮತ್ತು ಅವ್ರ ಒಂದೂ ಜೀವನ ಚರಿತ್ರೆ ಮುಂದೊಂದದಿನಾ ಕಿಳುರಿಮೆ ಇಂದ ಹೊರ ಬನ್ನಿ ನಾವೆಲ್ಲ ಒಂದೂ ನಾವೆಲ್ಲ ಹಿಂದು ಅನ್ನೋ ಪದ ಮತ್ತೆ ಮತ್ತೆ ನೆನಪಾಗುತ್ತೆ ಜೈ ಶ್ರೀ ಕೃಷ್ಣ
ಕರ್ಣ ಎನ್ನುವ ಪಾತ್ರ ಮಹಾಭಾರತದ ಮಹೋನ್ನತ ಪಾತ್ರ
ಕರ್ಣಾ ಎನೋ ನಿನ್ನ ಕಥೆ ನಿನ್ನ ಸಾವಿನ ಸುದ್ದಿ ಕೆಳಿ ನನ್ನ ಮನಸ್ಸು ತುಂಬಿಬಂತು
ಮಹಾಭಾರತ ಅಂದರೆ, ನಮ್ಮಗಳ ಬದುಕಿಗೆ ತುಂಬಾ ಹತ್ತಿರವಾದ ಬದುಕಿನ ಪಾಠ.
ಜೈ ಗೋಮಾತ🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದೂಸ್ತಾನ್ 🇮🇳🇮🇳🇮🇳...
ಯಾರ್ ಯಾರ್ ಭಾರತ ವೆಸ್ಟ್ ಇಂಡೀಸ್ ಮ್ಯಾಚುಗಿಂತ ಕರ್ಣನ episode ಗಾಗಿ ಕಾಯುತ್ತಿದ್ದೀರಿ!!??
ಈ ಭಾಗದ ಕೊನೆಯ ಮಾತುಗಳು ತುಂಬಾ ಅರ್ಥ ಪೂರ್ಣ ವಾಗಿದ್ದಾವು sir. ನಾವು ಈ ಮಾತುಗಳನ್ನು ಅಳವಡಿಸಿಕೊಳ್ಳಬೇಕು
ಮಹನೀಯರೇ, ನಾನು ಕೆಲವು ಬಾರಿ ನನ್ನ ಕಿರಿಯರಿಗೆ ನನಗೆ ತಿಳಿದಷ್ಟು ಮಹಾಭಾರತದ ಕಥೆ ಮತ್ತು ಉಪಕಥೆಗಳನ್ನು ಹೇಳುವ ಸಂದರ್ಭದಲ್ಲಿ ಯುದ್ಧ ಪ್ರಸಂಗವನ್ನು ಕೇವಲ ೧೮ ದಿನಗಳ ಯುದ್ಧವಷ್ಟೇ ಎಂದು ಹೇಳುತ್ತಿದ್ದೆ, ಆದರೆ ನಿಮ್ಮ ಸಹಾಯದಿಂದ ಅವರಿಗೆ ನನಗರಿತಷಷ್ಟು ಯುದ್ಧ ಪ್ರಸಂಗವನ್ನು ವರ್ಣಿಸಬಹುದಾಗಿದೆ. ಮನ ತುಂಬಿದ ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ......
ಹಾಗೆ ಇದ್ದರೆ ಹೀಗೆ ಆಗ್ತಿತ್ತು...
ಅಂತ ಸಾಗುವುದೇ ಈ ಮಹಾಭಾರತ,
ಎಲ್ಲ ಕಾಲಕ್ಕೂ ಎಲ್ಲ ದೇಶಗಳಿಗೂ ಜಗತ್ತಿನ ಪ್ರತಿ ಪ್ರಜೆಗೂ ಹೊಂದಾಣಿಕೆಯಾಗುತ್ತದೆ ಈ ಮಹಾಭಾರತ.....
ಜಗತ್ತಿಗೆ ಭಾರತ ಕೊಟ್ಟ ಅತ್ಯದ್ಭುತ ಕೊಡುಗೆ.....
ಸರ್ ಕೃಷ್ಣ ಗೆ ಕೃಷ್ಣಾಷ್ಟಮಿ ಇರೋ ತರ ಕರ್ಣನ ಹುಟ್ಟಿದ ದಿನ ಯಾವುದು ಅಂತ ತಿಳಿಸಿ ಕೊಡಿ plzzz
ಮಹಾಭಾರತದ ಕರ್ಣನ ಪಾತ್ರದಿಂದ ನಾವು ತುಂಬಾ ಪಾಠವನ್ನು ಕಲಿಯಬೇಕಾಗಿದೆ ಒಳ್ಳೆಯದು-ಕೆಟ್ಟದ್ದು
ನಿಮ್ಮ ಎಲ್ಲಾ ಸಂಚಿಕೆಗಳು ಅತ್ಯದ್ಭುತ
ಕರ್ಣನ ಅಂತ್ಯ... ಮನಸ್ಸು ಬಾರವಾಯಿತು ಗುರುಗಳೆ
Sir! I addicted to your Mahabharata series ........
Matte yar-yar addicted agiddira,,,,?
I'm also
Me too!!
@@chethanchethan1098 Love you bro jai Hind..
Same
Me
ಜೈ ಕರ್ನಾಟಕ ಜೈ ಕರ್ಣ🏹🏹🎯
Big fan of KARNA 😍
ಕೇಳೋಕೆ ತುಂಬಾ ಖುಷಿಯಾಗುತ್ತೆ, ನಿಮ್ಮ ಧ್ವನಿ, ಮತ್ತೆ ಮಹಾಭಾರತ ವರ್ಣನೆ ಅತ್ಯದಭುತವಾಗಿ ಬರ್ತಿದೆ ಗುರುಗಳೇ...
ಸೂಪರ್... ಸೂಪರ್... ಸೂಪರ್... ಧನ್ಯವಾದಗಳು... ಸರ್....
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
ಕರ್ಣ ಸತ್ತು ಎಷ್ಟು ದಿನ ಆದ್ರೂ ಆತನ ಒಳ್ಳೆ ತನ ಇನ್ನೂ ಇದೆ ಅಂದ್ರೆ ಆತನ ಸಾಧನೆ ಆತನ ವ್ಯಕ್ತಿತ್ವ ಯಂತದು ಇರುಭೋಹುದು friends think Madi one sari
ಹೃದಯ ತುಂಬಿ ಬಂತು ಸರ್, ಒಂದುಕ್ಷಣ ಹಾಗೇ ಎಲ್ಲವೂ ಕಣ್ಣಮುಂದೆ ಬಂದಹಾಗಾಯಿತು.
ಕೊನೆಯಲ್ಲಿ ನೀವು ಹೇಳಿದಿರಲ್ಲ, ಕೀಳರಿಮೆಯನ್ನು ಯಾರೂ ಬೆಳೆಸಿಕೊಳ್ಳಬಾರದು, ಬೆಳೆಸಿಕೊಂಡು ಹೋದರೆ ಏನಾಗುತ್ತದೆ ಎಂಬುದಕ್ಕೆ ಮಹಾವೀರ, ದಾನಶೂರ ಕರ್ಣ ಒಂದು ಸ್ಪಷ್ಟ, ಉದಾಹರಣೆ.
ಈ ದಿನದ ಮಹಾಭಾರತದ ಕಥಾಮೃತ, ನನಗೆ ತುಂಬ ಇಷ್ಟವಾಗುವುದರ ಜೊತೆಗೆ, ಕರ್ಣನ ಕರುಣಾಜನಕ ಕಥೆಯನ್ನು ಕೇಳಿ ದುಃಖವೂ ಆಯಿತು.
ಜೈ ಶ್ರೀ ಕೃಷ್ಣ.
Waah waah... ಎಂತಾ ತಾತ್ಪರ್ಯ... ಅದ್ಭುತ... Thank you sir...☺️😍
Adru thumb feel agthide sir.adru yarannu keelagi nodbardu annodu thilithide, Really Great karna.
ಧನ್ಯವಾದಗಳು ಗುರುಗಳೇ, ಈ ದೃಶ್ಯದ ಕಡೆ ೫ ನಿಮಿಷದ ರಹಸ್ಯಕ್ಕಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದು ನಿಮ್ಮ ವಾಹಿನಿಯ ಮೂಲಕ ತಿಳಿಸಿ ಕೊಟ್ಟಿದ್ದಕ್ಕೆ ಮಗದೊಮ್ಮೆ ಧನ್ಯವಾದಗಳು.
ಬಹಳ ಜ್ಞಾನಮಯ ವಾಗಿದೆ ಗುರುಗಳೆ....
ಇಂದಿನವರೆಗೆ ಮಹಾಭಾರತ ಕಥಾಮೃತ 62 ವಿಡಿಯೋಗಳು ಪೈಕಿ ಇದು ಅತ್ಯಂತ ಶ್ರೇಷ್ಠವಾದದ್ದು
ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
ನಾನು ಸುಮಾರು 7 ರಿಂದ 8 ಸಾರಿ ಕೇಳಿದ್ದೀನಿ ಬಲದೇವ ಬಲರಾಮರ ಬಗ್ಗೆ
Howdu sir Ravi sir bhalla
Dinadinda keltha eddare
Madi sir balaramanabagge
Video madi sir
ಮುಗಿಯಿತ್ತು ಮಹಾಭಾರತ. ವೀರ ಕರ್ಣನ ಅಂತ್ಯ ವೀರ ನಿನಗೆ ನೀನೆ ಸಾಟಿ. ಭಡಾ ಕರ್ಣ ಭಡಾ.
Karna..💥🔥🔥
ಸೂರ್ಯಪುತ್ರ miss u
ಕರ್ಣನಿಗೆ ಪದೇಪದೇ ಜಾತಿ ನಿಂದನೆಯಿಂದ ಅವಮಾನ ಉಂಟಾಯಿತು ಆದರೆ ಒಂದು ಅವಮಾನ ವ್ಯಕ್ತಿಯನ್ನು ಸನ್ಮಾನದ ಸನ್ಮಾನದ ಮಾರ್ಗಕ್ಕೂ ಮತ್ತು ದ್ವೇಷದ ಮಾರ್ಗಕ್ಕೂ ಕರೆದುಕೊಂಡು ಹೋಗುತ್ತದೆ ಆದರೆ ಇದು ಕೀಳರಿಮೆ ಅಲ್ಲ ಕರ್ಣ ಪಾತ್ರ ಮಹಾಭಾರತದಲ್ಲಿ ಅದ್ಭುತವಾದದ್ದು ಎಲ್ಲರಿಂದಲೂ ಉಪಯೋಗಿಸಲ್ಪಟ್ಟ ವ್ಯಕ್ತಿತ್ವ
ಸೂಪರ್ ಸಾರ್ ಎನ್ನಾ ಹೇಳಬೇಕು ಗೋತ್ತಗುತ್ತಿಲ್ಲ ಅಷ್ಟು ಚನ್ನಾಗಿದೆ
ನಿಮ್ಮ ದ್ವನಿ ಕೇಳಿದರೆ ಏನೋ ಸಮಾಧಾನ ಸರ್
ಸರ್ವ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ ವಂದೇ ಜಗದ್ಗುರು ನಮಸ್ಕಾರ
ಕೃಷ್ಣಯ ನಮಃ🙏🙏🙏🙏🙏🙏🙏
ಅದ್ಭುತ ಸರ್ 🙏
ಸರ್ ಕರ್ಣ ಮೊದಲ ದಿನವೇ ಅಸ್ತಿನಾವತಿಗೆ ಬಂದಾಗ ಕುರುವಂಶದ ವಿದ್ಯಾಭ್ಯಾಸ ದ್ ಪರೀಕ್ಷೆ ನಡೆದಿರುತ್ತದೆ. ಆಗ ಗುರು ಡ್ರೋಣ್ ರು ಅರ್ಜುನ್ ಮಹಾ ಶೇಷ್ರ ಎಂದು ಹೇಳಿದರು. ಆಗ ಕರ್ಣ ಮೊದಲ ನನ್ನನ್ನು ಮಿರಿಸು ಆಮೇಲೆ ನೀನು ಶೇಷ್ರ ಎಂದು ಹೇಳಿದಾಗ ಅವನನ್ನು ನೋಡಿ ಎಲ್ಲರೂ ಸೂತ ಎಂದು ಅವಮಾನ ಮಾಡುತ್ತಾರೆ ಆಗ ಕರ್ಣ ಯುದ್ದ ಘೋಷಣೆ ಮಾಡಿದ್ದರೆ ಅವನಿಗೆ ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ಅರ್ಜುನ ಕೃಷ್ಣನನ್ನು ಒಬ್ಬನಿಂದ ಗೆಲ್ಲಲು ಹೇಗೆ ಸಾಧ್ಯ ಹೇಳಿ ಸರ್..
This is one of your best episodes.
Jai Hind, Jai Karnataka.
Super sir thumba chennagi heliddira...thank u
ನನಗೆ ಕರ್ಣನ ಚಕ್ರ ಬೂಮಿಗೆ ಹೂಳಲು ಬೇರೆ ಕಾರಣವನ್ನ ಒದಿದ್ದೆ , .....
ಈ ಸಂಚಿಕೆಯಲ್ಲಿ ಒಂದು ಉತ್ತಮವಾದ ಪಾಠವನ್ನು ಮಾಡಿದ್ದೀರಿ🙏
Jai hind jai karnataka.sir nim mahabharatad kate purti deshakke tiliyo tara yalla bhashe yallu kuda madi.nam darmad bagge yalla darmad janangakku kuda arivannu moodisi yakandre nammadu puratanavad modalane hindu darma .super sir.
Nimma videogagi kaytha erthini sir super video's
Gurugale neev karna na bagge helodakintha jaasti nam jeevanadalli naavu hege irbeku anno sathyana helidri gurugale.. Danyavadagalu..
ಸತ್ಯವಾದ ಮಾತು..
Adhak karanan karna
ಧನ್ಯವಾದಗಳು ಸರ್. ಅದ್ಭುತ ಪರಮ ಅದ್ಭುತ.
Even Krishna was also adharmi... He intentionally weakened karna by revealing his birth secret... It was adharma... Krishna was there during draupadi's swaymawara. When draupadi insulted karna, Krishna did not speak a single word.. this was also a kind of adharma...( I just want say that even Lord Krishna was also adharmi... But finally he established Dharma by following adharma path)
Bro plz understand every girl have own decisions about their groom... For that sake shri krishna keep quiet 🤫.
You first read Mahabharata... Krishna knew everyone previous birth karma...Draupadi born to marry Arjuna...her father did yajna to marry Draupadi to Arjuna
Nija
Karna is great man
Wonderful sir.karna is only of my best part in mahabaratha as my knowledge
ಇನ್ನೂ 15-20 ದಿನದಲ್ಲಿ 10 ಲಕ್ಷ ಜನ subscribe ಅಗ್ತಾರೆ, ನೂತನ ಸಾಧನೆಗೆ ಶುಭಾಶಯಗಳು.
ಜೈ ಗೋಮಾತ🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದೂಸ್ತಾನ್ 🇮🇳🇮🇳🇮🇳
ನನಗೆ ಒಂದು ಅರ್ಥ ಆಗ್ಲಿಲ್ಲ ಏನು ಅಂದ್ರೆ ನಾವು 980k subscribers iddeevi ಎಲ್ಲ ಒಂದು ಸಲ ನೋಡಿದರು 980 k views ಆಗಬೇಕು but subscribers ಯಾರು nodtilla ಅನ್ಸುತ್ತೇ..please guys ಇಂತ ನಮ್ಮ ಕನ್ನಡದ ಒಳ್ಳೇ channel ಅನ್ನು ನೋಡಿ ಬೆಳೆಸಿ..
ಗಂಧರ್ವ ರಾಜರ ಮೇಲೆ ಕರ್ಣ ಏಕೆ ಸೋತಿದ್ದು ವಿಡಿಯೋ ಮಾಡಿ ಸರ್
Most inspiring thought... danyavadagalu...🙏
Superbbb duper video.. my hero Karna....RIP..
Super Super Super Sir...................
ನಾನು ಅತ್ಯಂತ ದುಃಖದಿಂದ ನೋಡಿದ episode ಇದು
ಸ್ವ ಚಿಂತನೆ ಉನ್ನತಕೆ ದಾರಿ
ಪರ ಚಿಂತನೆ ಪತನಕೆ ದಾರಿ
ಈ ಎರಡು ಸಾಲುಗಳು ನನ್ನ
ಜೀವನದಲ್ಲಿ ಬಹಳ ದೊಡ್ಡ
ಪಾಠ ಕಳಿಸಿದೆ
One of the best episode,, last words abt karna,, it's really inspirational,, thank you so much
Thank you sir tumba lite madbitri e dena
ಮಹಾರಥಿ ಕರ್ಣ ನಿಗೆ ನಮೋ ನಮಃ
ಸರ್ ನನಗೆ ಮಹಾ ಭಾರತ ದಲ್ಲಿ ಅರ್ಥ ವಾಗದ ಪಾತ್ರ ಅಂದರೆ ಶಲ್ಯ ಆದುದರಿಂದ ಶಲ್ಯ ನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು
Salya na magalu nakulana hendathi. Kurusketra yudda suru vagovaga pandavara kade yudda madoke salya barthirovaga baro daariyalli duryodana salya na saynya vanna upacharisibidthane aga salya kouravara kade Subaru's vagi serkolebekaguthe
ARUNKUMAR T R ,shalya nakula ,sahadevara Amma madri ya Anna. he came to join pandavas in kurukshetra, but unfortunately he taken meals in kauravas camp.
so as per Dharma he joined kauravas party.
Maybe karana was deprived of the opportunities for him to shine! Frustration from society stopped karana from being what he could be!! He always be remembered as a great character n the best character in Mahabharata!! Love him a lot!!
Dhuryodhana Karna sathmele avanna nodoke bharuva sandharbhada bagge video madi
ಅಯ್ಯೊ ಸರ್ ವೀಡಿಯೋಗಾಗಿ ಕಾದು ಕಾದು ಬೇಜರಾಗಿತ್ತು.
ಅಬ್ಬ ಅಂತು ಹಾಕಿದ್ರಲ್ಲ ಧನ್ಯವಾದಗಳು.🙏🙏🙏
Ok
wait madta ede sir episode ge finally😍😍😍😍😍😍😍❤
Namaste sir media masters namaste sir 👌🙏karna 🙏🙏🙏
Sir evatu ನೀವು ಹೇಳಿದ ಕಥೆ ಕರ್ಣ ನದು, ಆದರೆ ಪ್ರತಿಯೊಬ್ಬ ಮನುಷ್ಯನ ಮನಸ್ಥಿತಿ ಯನ್ನ ಬದಲಾಯಿಸಲು ಸಹಾಯಕ, ಇದ್ದನ ಕೇಳಿದ ನಾವು
ನಮ್ಮ ಮನಸ್ಥಿತಿ ಯನ್ನಾ ಇನು ಹೆಚ್ಚು ಗಟ್ಟಿ ಗೊಲಿಸೋದಕೆ ಸಾಧ್ಯ.
Very nicely decoded of Mahakavya Mahabharata
ಹೀಗೆ ಮುಂದುವರಿಸಿ ಸಾರ್ ಬೇರೆ ಬೇರೆ ವಿಷಯಗಳನ್ನು 🙏🙏🙏🙏
ತುಂಬಾ ಚೆನ್ನಾಗಿದೆ ಸರ್
ಸರ್ ಯುದ್ಧದಲ್ಲಿ ಶಕುನಿಯ ಪಾತ್ರ ಏನು , ತಿಳಿಸಿಕೊಡಿ ಸರ್
Avane main bro kurukshetrakke
Tappu tilko bedi sir,
First time nimma videos nododu saku anistide
Karna ne illada mele yava mahabharatha,
surya irovaregu suryaputra na esaru sada irali.
Sir nev yene heli karna nijawada vyakthithva aghe krishnanigindha Maha balista aghu danashura aghu parashursmsara appts shshya
Sir. Naale karnana janma vritthaantha bagge Krishna paandavaralli thilisuva bagge vivarisi
Super sir ...!
Karna na character ondhu lesson namge...
🙏👌👌
Karnana savininda tumba novagtide gurugale
ಈ ೬೨ ರ ಅಧ್ಯಾಯ ನೋಡಲು ಕೂಡ ಬೇಸರ ಆ ದಾನ ಶೂರನ ಅಂತ್ಯ, ಆದರೆ ವಿಧೀಗೆ ಎಲ್ಲಾರು ಕೈಗೊಂಬೆ.
ಸೂಪರ್ ಸರ್ 🙏🙏
ಸೂಪ್ಪರ್ ಸರ್
ಕೊನೆಯಲ್ಲಿ ಹೇಳಿದ ಸಾರಾಂಶ ಕೆ ಧನ್ಯವಾದಗಳು ಸರ್....
Nivu heliddu 💯 sathya sir nam kelasa yavde agirali adu namm darmadanthe erabeku nanu annod bidbeku agle ne yellanu neravagi nodok saadya 🙏🙏🙏🙏
Last line super gurugale
Super message you you were conveyed by comparing with karna's life, and concluded well👆🔥👌👍🙏
Mahabharathadalli Abhimanyu matthe karnana saavu thumba dukkhada kshanagalu sir.ibbaru parakramigale but saayo reethi thumba hart madutthe mansige..
Nimminda thumba vishya thilkothidini sir nimge matthe media master ge dhanyavadagalu sir
ಸರ್ ಕೃಷ್ಣ ಅರ್ಜುನನಿಗೆ ಹೇಳುವುದು ಬಾಣ ಹೂಡು ಅರ್ಜುನ ಅಂತ
ಆದರೆ ನೀವು ಹೇಳುವ ಸಮಯದಲ್ಲಿ ಕೃಷ್ಣ ಕರ್ಣನಿಗೆ ಹೇಳುವ ಹಾಗೆ
ಬಾಣ ಹೂಡು ಕರ್ಣ ಎಂದು ಹೇಳಿದ್ದೀರಿ....
ಬ್ರಹ್ಮಾಸ್ತ್ರ ಅಲ್ಲ ಭಾರ್ಗವಾಸ್ತ್ರ ನೆನಪಿಗೆ ಬರಲಿಲ್ಲ, ವಿವರಗಳು ಪೂರ್ಣವಾಗಿಲ್ಲ, ಶೈಲಿ ಅದ್ಭುತವಾಗಿದೆ.
Tumba chennagittu sir neevu tilisi kotta pata
Thanks sir...