ಪೊಳಲಿ ನಾಗರಿಕರಿಗೆ ಶಾಸಕ ರಾಜೇಶ್ ನಾಯ್ಕ್ ರಿಂದ ಉಚಿತ ವಾಹನ ವ್ಯವಸ್ಥೆ l Suddi9
HTML-код
- Опубликовано: 12 сен 2024
- #polali
ಪೊಳಲಿ ನಾಗರಿಕರಿಗೆ ಶಾಸಕ ರಾಜೇಶ್ ನಾಯ್ಕ್ ರಿಂದ ಉಚಿತ ವಾಹನ ವ್ಯವಸ್ಥೆ l Suddi9
ಬಂಟ್ವಾಳ: ಪೊಳಲಿಯಲ್ಲಿ ಹರಿಯುವ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಡ್ಡೂರು( ಪೊಳಲಿ) ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ವಿದ್ಯಾರ್ಥಿಗಳು,ಶ್ರೀ ಕ್ಷೇತ್ರ ಪೊಳಲಿಯ ಭಕ್ತಾದಿಗಳ ಹಾಗೂ ಜನರ ನಿತ್ಯ ಓಡಾಟಕ್ಕಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಯಕ್ತಿಕ ನೆಲೆಯಲ್ಲಿ ಉಚಿತ ಮಿನಿಬಸ್ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.ಶುಕ್ರವಾರ ಬೆಳಿಗ್ಗೆ ಪೊಳಲಿ ದೇವಾಲಯದಲ್ಲಿ ಪೂಜಾವಿಧಿವಿಧಾನ ನಡೆದ ಬಳಿಕ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಿನಿ ಬಸ್ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಚಂದ್ರಶೇಖರ್ ಶೆಟ್ಟಿ ಬಡ್ಕಬೈಲ್ ಜನರಿಗಾಗುವ ಸಮಸ್ಯೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರ ಗಮನಕ್ಕೆ ತಂದ 24 ತಾಸಿನೊಳಗೆ ಸ್ಪಂದಿಸಿ ಒಂದು ಮಿನಿ ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮಿನಿಬಸ್ ಅಡ್ಡೂರಿನಿಂದ ಪೊಳಲಿಗೆ ಮಾತ್ರ ಚಲಿಸಲಿದೆ. ಕೆಲಸಕ್ಕೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು, ಪೊಳಲಿಗೆ ಬರುವ ಭಕ್ತರಿಗೆ ಇದು ಅನುಕೂಲವಾಗಲಿದೆ. ಜನರ ಸಮಸ್ಯೆ ಅರಿತ ಶಾಸಕ ರಾಜೇಶ್ ನಾಯ್ಕ್ ಅವರು ಮಿನಿಬಸ್ ವಾಹನ ವ್ಯವಸ್ಥೆ ಮಾಡಿರುವುದಕ್ಕಾಗಿ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.